ಮುಜಾಫರ್ನಗರ: ತಮ್ಮ ವಿರುದ್ಧ ತಾರತಮ್ಯ ಮತ್ತು ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿರುವ 25 ದಲಿತರು, ಬೌದ್ಧಧರ್ಮಕ್ಕೆ ಮತಾಂತರಗೊಂಡಿದ್ದಾರೆ.
‘ನಮ್ಮನ್ನು ನಿಕೃಷ್ಟವಾಗಿ ಕಾಣುತ್ತಿರುವುದಕ್ಕೆ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದು ಮತಾಂತರಗೊಂಡ ದಲಿತರ ನಾಯಕ ದೇವಿದಾಸ್ ಜಯಂತ್ ಹೇಳಿದ್ದಾರೆ.
ಬೌದ್ಧ ಭಿಕ್ಷು ಭಾಂತೆ ಪರ್ಗ್ಯಶೀಲ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
‘ಯಾವುದೇ ದಬ್ಬಾಳಿಕೆ ಅಥವಾ ಒತ್ತಾಯದ ಕಾರಣದಿಂದ ದಲಿತರು ಮತಾಂತರವಾಗಿಲ್ಲ’ ಎಂದು ಹೇಳಿರುವ ಪೊಲೀಸ್ ಅಧಿಕಾರಿ ರಾಜೇಶ್ಕುಮಾರ್ ತಿವಾರಿ, ‘ಪ್ರತಿಯೊಬ್ಬರು ತಮಗೆ ಇಷ್ಟವಾದ ಧರ್ಮವನ್ನು ಅನುಸರಿಸುವ ಸ್ವಾತಂತ್ರ್ಯ ಹೊಂದಿದ್ದಾರೆ’ ಎಂದು ಹೇಳಿದ್ದಾರೆ.