‘ಸಂವಿಧಾನದ ವಿರುದ್ಧವೇ ಸದಾ ಇರುವವರು ನ್ಯಾಯಾಂಗದ ಮೇಲೆಯೂ ನಿರಂತರ ದಾಳಿ ನಡೆಸುತ್ತಿದ್ದಾರೆ. ಜಿಹಾದ್ಗಾಗಿ ಮುಸ್ಲಿಮರಿಗೆ ಕುಮ್ಮಕ್ಕು ನೀಡುತ್ತಿರುವವರು ತಮ್ಮ ಕೊನೆಯ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. ಹೆಚ್ಚಿನ ಕಕ್ಷಿದಾರರು ಅಯೋಧ್ಯೆಯಲ್ಲಿ ಜಮೀನು ಪಡೆಯಲು ಒಪ್ಪಿದ್ದಾರೆ. ನಿಮಗೆ ಆ ಜಮೀನು ಬೇಡ ಎಂದಿದ್ದರೆ ಸುಪ್ರೀಂ ಕೋರ್ಟ್ಗೆ ಅದನ್ನು ತಿಳಿಸಿ’ ಎಂದು ವಿಎಚ್ಪಿ ವಕ್ತಾರ ವಿನೋದ್ ಬನ್ಸಾಲ್ ಹೇಳಿದ್ದಾರೆ.