ಪ್ರಹ್ಲಾದ್ ಎಂಬಾತನ ಮೇಲೆ ನಾಯಿಗಳು ದಾಳಿ ಮಾಡಿದ್ದವು. ಹೀಗಾಗಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ಮೋಹನ್ ಮೇಲೆ ಪ್ರಹ್ಲಾದ್ ಜಗಳ ತೆಗೆದಿದ್ದ. ನಿತ್ಯ ಆಹಾರ ನೀಡುವುದರಿಂದ ನಾಯಿಗಳ ಹಾವಳಿ ಹೆಚ್ಚಾಗುತ್ತದೆ ಎಂದು ಮೋಹನ್ಗೆ ಎಚ್ಚರಿಕೆ ನೀಡಿದ್ದ. ಆದರೆ ಇಬ್ಬರ ಜಗಳ ತಾರಕಕ್ಕೇರಿತು. ಮನೆಗೆ ಹೋಗಿ ಚಾಕು ತೆಗೆದುಕೊಂಡು ವಾಪಸಾದ ಪ್ರಹ್ಲಾದ್, ಮೋಹನ್ಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.