ಇಂದು ನಸುಕಿನ ಸುಮಾರು 3 ಗಂಟೆಗೆ ಸುಪ್ರೀಂ ಕೋರ್ಟ್ನಲ್ಲಿ ಅಪರಾಧಿಗಳಿಗೆ ಮರಣದಂಡನೆ ವಿಧಿಸುವ ಬಗ್ಗೆ ವಾದ–ವಿವಾದಗಳು ಆರಂಭಗೊಂಡವು. 3:50ಕ್ಕೆ ಅಪರಾಧಿಗಳು ಸಲ್ಲಿಸಿದ್ದ ಅರ್ಜಿ ವಜಾಗೊಂಡು, ಗಲ್ಲಿ ಶಿಕ್ಷೆ ಕಾಯಂಗೊಳಿಸಿ ತೀರ್ಪು ನೀಡಲಾಯಿತು. ಆ ವೇಳೆ, ನಿರ್ಭಯಾ ಪರ ವಕೀಲೆ ಸೀಮಾ ಕುಶ್ವಾಹ ಮತ್ತು ನಿರ್ಭಯಾ ತಂದೆ–ತಾಯಿಗಳು ಸುಪ್ರೀಂ ಕೋರ್ಟ್ನಲ್ಲೇ ಭಾವುಕರಾದರು.