1997 ರಲ್ಲಿ ಡಿಯೋಲ್ ಮತ್ತು ಕಪೂರ್ ಹಾಗೂ ಇತರರು ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಫುಲೇರಾ ಸಮೀಪದ ಸನ್ವರ್ದಾ ಎಂಬಲ್ಲಿಗೆ ‘ಭಜರಂಗ್’ ಚಿತ್ರ ಚಿತ್ರೀಕರಣಕ್ಕಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಇಬ್ಬರೂ ಕಲಾವಿದರು ರೈಲಿನ ಚೈನ್ ಎಳೆದಿದ್ದಾರೆ. ಇದರಿಂದ ರೈಲು 25 ನಿಮಿಷ ವಿಳಂಬವಾಗಿದೆ ಎಂಬ ಆರೋಪವಿದೆ. ಇಬ್ಬರ ಜತೆ ಸಾಹಸ ನಿರ್ದೇಶಕ ಟಿನು ವರ್ಮಾ ಮತ್ತು ಸತೀಶ್ ಷಾ ಅವರನ್ನೂ ಆರೋಪಿಗಳಾಗಿ ಮಾಡಲಾಗಿದೆ.ಇವರು ಮಾತ್ರ ತಮ್ಮ ಮೇಲಿನ ಆರೋಪವನ್ನು ಸೆಷೆನ್ಸ್ ಕೋರ್ಟ್ನಲ್ಲಿ 2010ರಲ್ಲಿ ಪ್ರಶ್ನಿಸಿಲ್ಲ.