ಮುಖ್ಯಮಂತ್ರಿ ಜೊತೆಗೆ ರಾಜ್ಯ ಸಚಿವಾಲಯದ ಕೊಠಡಿಯಲ್ಲಿ ಪ್ರತ್ಯೇಕವಾಗಿ ಮಾತುಕತೆ ನಡೆಸಲು ತಮ್ಮ ಸುರಕ್ಷತೆಯ ನೆಪವೊಡ್ಡಿ ನಿರಾಕರಿಸಿದ್ದ ವೈದ್ಯರು, ಭಾನುವಾರ ತಮ್ಮ ನಿಲುವು ಸಡಿಲಿಸಿದರು. ‘ಅನಿಶ್ಚಿತತೆಗೆ ತೆರೆ ಎಳೆಯಲು ನಾವು ಉತ್ಸುಕರಾಗಿದ್ದೇವೆ. ಮಾತುಕತೆಯ ಸ್ಥಳವನ್ನು ಮುಖ್ಯಮಂತ್ರಿಯೇ ನಿಗದಿಪಡಿಸಲಿ. ಆದರೆ ಚರ್ಚೆ ಬಹಿರಂಗವಾಗಿ ನಡೆಯಬೇಕು. ಮಾಧ್ಯಮಗಳು ಅಲ್ಲಿ ಇರಬೇಕು’ ಎಂದು ವೈದ್ಯರು ಒತ್ತಾಯಿಸಿದರು.