ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿಯನ್ನು ಪೊಲೀಸರಿಗೊಪ್ಪಿಸಿದ ಉಬರ್‌ ಕ್ಯಾಬ್‌ ಚಾಲಕನಿಗೆ ಸನ್ಮಾನ

Last Updated 8 ಫೆಬ್ರುವರಿ 2020, 18:26 IST
ಅಕ್ಷರ ಗಾತ್ರ

ಮುಂಬೈ: ಉಬರ್‌ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪೌರತ್ವ (ಕಾಯ್ದೆ) ತಿದ್ದುಪಡಿ (ಸಿಎಎ) ವಿರುದ್ಧದ ಪ್ರತಿಭಟನೆಗಳ ಕುರಿತು ಮಾತನಾಡಿದ ಸಾಹಿತಿ ಬಪ್ಪಾದಿತ್ಯ ಸರ್ಕಾರ್‌ ಅವರನ್ನು ಪೊಲೀಸರಿಗೊಪ್ಪಿಸಿದ ಚಾಲಕನಿಗೆ ಬಿಜೆಪಿ ಮುಂಬೈ ಘಟಕದ ಅಧ್ಯಕ್ಷ ಮಂಗಲ್‌ ಪ್ರಭಾತ್‌ ಲೋಧಾ ಅವರು ಶನಿವಾರ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಕ್ಯಾಬ್‌ ಚಾಲಕ ರೋಹಿತ್‌ ಗೌರ್‌ ಅವರಿಗೆಸಾಂತಾಕ್ರೂಜ್‌ ಪೊಲೀಸ್‌ ಠಾಣೆಯಲ್ಲಿ ಅವರು ‘ಜಾಗೃತ ನಾಗರಿಕ ಪ್ರಶಸ್ತಿ’ ಪ್ರದಾನ ಮಾಡಿದರು.

‘ಬಪ್ಪಾದಿತ್ಯ ಅವರು ಸಿಎಎ ವಿರುದ್ಧ ದೇಶ ವಿರೋಧಿ ಪಿತೂರಿ ನಡೆಸಿದ್ದಾರೆ’ ಎಂದು ಮಂಗಲ್‌ ಪ್ರಭಾತ್‌ ಆರೋಪಿಸಿದ್ದಾರೆ.ರೋಹಿತ್‌ ಅವರಿಗೆ ಸನ್ಮಾನ ಮಾಡುವ ಚಿತ್ರವನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT