ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ‘ಉಗ್ರರ ಅಡಗುದಾಣಗಳ ಬಗ್ಗೆ ಭಾರತಕ್ಕೆ ನಿಖರ ಮಾಹಿತಿ ಇತ್ತು. ದಾಳಿ ಮಾಡಲು ವಾಯುಪಡೆಯು ಸಕಲ ರೀತಿಯಿಂದಲೂ ಸಿದ್ಧವಾಗಿತ್ತು. ಆದರೆ, ಅನುಮತಿ ನಿರಾಕರಿಸಲಾಯಿತು. ದಾಳಿ ನಡೆಸಬೇಕೋ ಬೇಡವೋ ಎಂಬುದರ ಕುರಿತ ನಿರ್ಧಾರ ರಾಜಕೀಯ ಪ್ರೇರಿತವಾಗಿತ್ತು,’ ಎಂದು ಅವರು ತಿಳಿಸಿದ್ದಾರೆ.