ಮುಂಬೈ: ವಾಣಿಜ್ಯ ನಗರಿ ಮುಂಬೈ ಮತ್ತು ಮಹಾರಾಷ್ಟ್ರದ ಕೊಂಕಣ ಕರಾವಳಿ ಪ್ರದೇಶದಲ್ಲಿಭಾರಿ ಮಳೆ ಮುಂದುವರಿದಿದೆ. ಲೋಕಲ್ ರೈಲುಗಳ ಸಂಚಾರವನ್ನು ಸೀಮಿತಗೊಳಿಸಲಾಗಿದೆ. ಬೆಂಗಳೂರು ಸೇರಿದಂತೆ ದೇಶದ ಇತರ ನಗರಗಳಿಂದ ಮುಂಬೈಗೆಸಂಪರ್ಕ ಕಲ್ಪಿಸುವ ಹಲವು ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ, ಕೆಲ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಮಳೆಯಿಂದಾಗಿ ನಗರದಲ್ಲಿ ವ್ಯಾಪಕವಾಗಿ ನೀರು ನಿಂತಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನ, ಕರ್ನಾಳ ಪಕ್ಷಿತಾಣ, ತುಂಗಾರೇಶ್ವರ ಮತ್ತು ತಾನ್ಸಾ ಅಭಯಾರಣ್ಯಗಳಲ್ಲಿ ತೊರೆಗಳು ಉಕ್ಕಿ ಹರಿಯುತ್ತಿದ್ದು,ಜಲಪಾತಗಳು ಮೈಂದುಂಬಿಕೊಂಡಿವೆ.
ಸಮುದ್ರದಲ್ಲಿ ಅಲೆಗಳ ಹೊಡೆತ ಜೋರಾಗಿದೆ. ನಾಗರಿಕರಿಗೆ ಬೀಚ್ಗಳ ಸಮೀಪ ತೆರಳದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರೈಲು ಸಂಚಾರದಲ್ಲಿ ವ್ಯತ್ಯಯ
ರದ್ದಾದ ರೈಲುಗಳು
ಮುಂಬೈ–ಸೊಲ್ಲಾಪುರ ಸಿದ್ದೇಶ್ವರ ಎಕ್ಸ್ಪ್ರೆಸ್
ಮುಂಬೈ–ಚೆನ್ನೈ ಮೇಲ್
ಭಾಗಶಃ ರದ್ದು ಬಿಜಾಪುರ–ಮುಂಬೈ ಫಾಸ್ಟ್ ಪ್ಯಾಸೆಂಜರ್ (ಪುಣೆಯವರೆಗೆ ಮಾತ್ರ)