<p><strong>ಬೆಂಗಳೂರು:</strong> ಕೆನರಾ ಬ್ಯಾಂಕ್ನಿಂದ ₹75 ಲಕ್ಷ ಡ್ರಾ ಮಾಡಿಕೊಂಡು ಪ್ರಚಾರ ಸಾಮಗ್ರಿಗಳನ್ನು ಖರೀದಿಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪದಡಿ ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಟಿ.ಎನ್.ಜವರಾಯಿಗೌಡ ವಿರುದ್ಧ ಎಫ್ಐಆರ್ ದಾಖಲಾಗಿದೆ.</p>.<p>ಸ್ಥಳೀಯ ’ಮಂಜುನಾಥ್ ಟ್ರೇಡಿಂಗ್’ ಕಂಪನಿ ಕಚೇರಿ ಮೇಲೆ ಮೇ 11ರಂದು ದಾಳಿ ಮಾಡಿದ್ದ ಚುನಾವಣಾಧಿಕಾರಿಗಳು, ₹60 ಸಾವಿರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದರು. ದಾಳಿ ಸಂಬಂಧ ಅಧಿಕಾರಿ ವಿ.ನಂಜಪ್ಪ ನೀಡಿದ ದೂರಿನನ್ವಯ ಮೇ 14ರಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದರು.</p>.<p>ನಂಜಪ್ಪ ಅವರಿಗೆ ಮೇ 11ರಂದು ಕರೆ ಮಾಡಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು, ನಾಗರಬಾವಿಯ ಕೆನರಾ ಬ್ಯಾಂಕ್ನಿಂದ ’ಮಂಜುನಾಥ್ ಟ್ರೇಡಿಂಗ್’ ಹೆಸರಿನಲ್ಲಿ ₹75 ಲಕ್ಷ ಡ್ರಾ ಮಾಡಿಕೊಳ್ಳಲಾಗಿದೆ. ಅದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯೇ? ಎಂಬುದನ್ನು ಪರಿಶೀಲಿಸಿ ಎಂದಿದ್ದರು.</p>.<p>ಅದರಂತೆ, ಅಧಿಕಾರಿಗಳ ತಂಡವು ’ಮಂಜುನಾಥ್ ಟ್ರೇಡಿಂಗ್’ ಕಂಪನಿ ಕಚೇರಿಗೆ ಹೋಗಿ ಪರಿಶೀಲನೆ ನಡೆಸಿತ್ತು. ಜವರಾಯಿಗೌಡ ಅವರಿಗೆ ಸೇರಿದ್ದ ಜೆಡಿಎಸ್ ಪಕ್ಷದ ಚಿಹ್ನೆಯುಳ್ಳ 52 ಟೀ ಶರ್ಟ್, 1,200 ಟೋಪಿಗಳು, 9,000 ಬ್ಯಾಡ್ಜ್ ಹಾಗೂ 6,000 ಕರಪತ್ರಗಳು ಸಿಕ್ಕಿದ್ದವು ಎಂದರು.</p>.<p>ಡ್ರಾ ಮಾಡಿಕೊಂಡ ಹಣಕ್ಕೆ ಕಂಪನಿಯ ಪ್ರತಿನಿಧಿಗಳು ಯಾವುದೇ ದಾಖಲೆ ಸಹ ನೀಡಿರಲಿಲ್ಲ. ಜತೆಗೆ, ಪ್ರಚಾರ ಸಾಮಗ್ರಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದು ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ ಎಂದು ದೂರಿನಲ್ಲಿ ನಂಜಪ್ಪ ತಿಳಿಸಿದ್ದಾರೆ ಎಂದು ಪೊಲೀಸರು ವಿವರಿಸಿದರು.<br /> *<br /> <strong>‘ಶೀಘ್ರವೇ ನೋಟಿಸ್’</strong><br /> ದಾಳಿ ಸಂಬಂಧ ಆರಂಭದಲ್ಲಿ ಗಂಭೀರವಲ್ಲದ ಪ್ರಕರಣ (ಎನ್ಸಿಆರ್) ಎಂದು ನಮೂದು ಮಾಡಿಕೊಂಡಿದ್ದೆವು. ನ್ಯಾಯಾಲಯದ ಸೂಚನೆಯಂತೆ ಎಫ್ಐಆರ್ ದಾಖಲಿಸಿಕೊಂಡಿದ್ದೇವೆ. ವಿಚಾರಣೆಗೆ ಬರುವಂತೆ ಜವರಾಯಿಗೌಡರಿಗೆ ಸದ್ಯದಲ್ಲೇ ನೋಟಿಸ್ ನೀಡಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೆನರಾ ಬ್ಯಾಂಕ್ನಿಂದ ₹75 ಲಕ್ಷ ಡ್ರಾ ಮಾಡಿಕೊಂಡು ಪ್ರಚಾರ ಸಾಮಗ್ರಿಗಳನ್ನು ಖರೀದಿಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪದಡಿ ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಟಿ.ಎನ್.ಜವರಾಯಿಗೌಡ ವಿರುದ್ಧ ಎಫ್ಐಆರ್ ದಾಖಲಾಗಿದೆ.</p>.<p>ಸ್ಥಳೀಯ ’ಮಂಜುನಾಥ್ ಟ್ರೇಡಿಂಗ್’ ಕಂಪನಿ ಕಚೇರಿ ಮೇಲೆ ಮೇ 11ರಂದು ದಾಳಿ ಮಾಡಿದ್ದ ಚುನಾವಣಾಧಿಕಾರಿಗಳು, ₹60 ಸಾವಿರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದರು. ದಾಳಿ ಸಂಬಂಧ ಅಧಿಕಾರಿ ವಿ.ನಂಜಪ್ಪ ನೀಡಿದ ದೂರಿನನ್ವಯ ಮೇ 14ರಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದರು.</p>.<p>ನಂಜಪ್ಪ ಅವರಿಗೆ ಮೇ 11ರಂದು ಕರೆ ಮಾಡಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು, ನಾಗರಬಾವಿಯ ಕೆನರಾ ಬ್ಯಾಂಕ್ನಿಂದ ’ಮಂಜುನಾಥ್ ಟ್ರೇಡಿಂಗ್’ ಹೆಸರಿನಲ್ಲಿ ₹75 ಲಕ್ಷ ಡ್ರಾ ಮಾಡಿಕೊಳ್ಳಲಾಗಿದೆ. ಅದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯೇ? ಎಂಬುದನ್ನು ಪರಿಶೀಲಿಸಿ ಎಂದಿದ್ದರು.</p>.<p>ಅದರಂತೆ, ಅಧಿಕಾರಿಗಳ ತಂಡವು ’ಮಂಜುನಾಥ್ ಟ್ರೇಡಿಂಗ್’ ಕಂಪನಿ ಕಚೇರಿಗೆ ಹೋಗಿ ಪರಿಶೀಲನೆ ನಡೆಸಿತ್ತು. ಜವರಾಯಿಗೌಡ ಅವರಿಗೆ ಸೇರಿದ್ದ ಜೆಡಿಎಸ್ ಪಕ್ಷದ ಚಿಹ್ನೆಯುಳ್ಳ 52 ಟೀ ಶರ್ಟ್, 1,200 ಟೋಪಿಗಳು, 9,000 ಬ್ಯಾಡ್ಜ್ ಹಾಗೂ 6,000 ಕರಪತ್ರಗಳು ಸಿಕ್ಕಿದ್ದವು ಎಂದರು.</p>.<p>ಡ್ರಾ ಮಾಡಿಕೊಂಡ ಹಣಕ್ಕೆ ಕಂಪನಿಯ ಪ್ರತಿನಿಧಿಗಳು ಯಾವುದೇ ದಾಖಲೆ ಸಹ ನೀಡಿರಲಿಲ್ಲ. ಜತೆಗೆ, ಪ್ರಚಾರ ಸಾಮಗ್ರಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದು ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ ಎಂದು ದೂರಿನಲ್ಲಿ ನಂಜಪ್ಪ ತಿಳಿಸಿದ್ದಾರೆ ಎಂದು ಪೊಲೀಸರು ವಿವರಿಸಿದರು.<br /> *<br /> <strong>‘ಶೀಘ್ರವೇ ನೋಟಿಸ್’</strong><br /> ದಾಳಿ ಸಂಬಂಧ ಆರಂಭದಲ್ಲಿ ಗಂಭೀರವಲ್ಲದ ಪ್ರಕರಣ (ಎನ್ಸಿಆರ್) ಎಂದು ನಮೂದು ಮಾಡಿಕೊಂಡಿದ್ದೆವು. ನ್ಯಾಯಾಲಯದ ಸೂಚನೆಯಂತೆ ಎಫ್ಐಆರ್ ದಾಖಲಿಸಿಕೊಂಡಿದ್ದೇವೆ. ವಿಚಾರಣೆಗೆ ಬರುವಂತೆ ಜವರಾಯಿಗೌಡರಿಗೆ ಸದ್ಯದಲ್ಲೇ ನೋಟಿಸ್ ನೀಡಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>