ನವದೆಹಲಿ: ಹದಿಮೂರು ಮಂದಿ ಇದ್ದ ಭಾರತೀಯ ವಾಯುಪಡೆಯ ಸರಕು ಸಾಗಾಣೆ ವಿಮಾನ ಎಎನ್–32 ಕಾಣೆಯಾಗಿ ಇಂದಿಗೆ 8 ದಿನಗಳಾಗಿದ್ದು, ಈ ವರೆಗೆ ಪತ್ತೆಯಾಗಿಲ್ಲ. ಈ ಬಗ್ಗೆಸೋಮವಾರ ಟ್ವೀಟ್ ಮಾಡಿರುವ ಭಾರತೀಯ ವಾಯು ಪಡೆ ಪತ್ತೆ ಕಾರ್ಯ ಮುಂದುವರಿಸಿರುವುದಾಗಿ ಹೇಳಿದೆ.
ಕಳೆದ ಸೋಮವಾರ 13ಮಂದಿ ಸೇನಾ ಸಿಬ್ಬಂದಿಯನ್ನು ಹೊತ್ತ ವಿಮಾನವು ಅರುಣಾಚಲ ಪ್ರದೇಶದ ಮೆನ್ಚುಕಾಗೆ ತೆರಳಲುಅಸ್ಸಾಂನ ಜೊರ್ಹತ್ ವಾಯುನೆಲೆಯಿಂದ ಮಧ್ಯಾಹ್ನ 12.27ಕ್ಕೆ ಟೇಕಾಫ್ ಆಗಿತ್ತು. ಆದರೆ, 1 ಗಂಟೆ ಹೊತ್ತಿಗೆ ಅದು ನಿಯಂತ್ರಣ ಕಳೆದುಕೊಂಡಿತ್ತು. ಅಂದಿನಿಂದ ಇಂದಿನವರೆಗೆ ವಾಯುಪಡೆ, ಭೂಸೇನೆ, ಸ್ಥಳೀಯ ಪೊಲೀಸರು, ರಾಜ್ಯ ಸರ್ಕಾರ, ಅರೆ ಸೇನಾ ಪಡೆ, ಸ್ಥಳೀಯರು ವಿಮಾನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಈ ವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ.
ಈ ಮಧ್ಯೆ ವ್ಯತಿರಿಕ್ತಹವಾಮಾನ ಪರಿಸ್ಥಿತಿ ಎದುರಾದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು. ಸೋಮವಾರ ಕಾರ್ಯಾಚರಣೆ ಮತ್ತೆ ಆರಂಭವಾಗಿದೆ.ಕಾಣೆಯಾದವರ ಕುಟುಂಬಗಳಿಗೆ ವಾಯುಪಡೆಯು ಈಗಾಗಲೇ ₹5 ಲಕ್ಷ ಪರಿಹಾರ ಘೋಷಣೆ ಮಾಡಿದೆ.
#IAF committed in Searching for the Missing #An32: Today there was marginal improvement in the weather & IAF intensified the search for the missing aircraft. Based on various available inputs, search area was expanded. Ground forces also increased the search. 1/2
— Indian Air Force (@IAF_MCC) June 10, 2019
ಹೆಲಿಕಾಪ್ಟರ್ಗಳು ಮತ್ತು ಸಿ–130ಎಸ್ ವಿಮಾನಗಳ ಮೂಲಕ ವೈಮಾನಿಕ ಶೋಧ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಸೇನೆ ಮತ್ತು ಯೋಧರ ವಿಚಾರಗಳು ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿವೆ.ಆದರೆ, ಈ ವಿಮಾನ ಕಾಣೆಯಾದ ವಿಚಾರ ಹೆಚ್ಚು ಸುದ್ದಿಯಾಗಲೇ ಇಲ್ಲ. ರಾಜಕೀಯ ಪಕ್ಷಗಳು, ಮುಖಂಡರು, ಸರ್ಕಾರಗಳೂ ಈ ಬಗ್ಗೆ ಮಾತನಾಡುತ್ತಿಲ್ಲ.
Search will continue throughout the night by airborne sensors and ground teams. #IAF is committed in finding the missing air-warriors. 2/2
— Indian Air Force (@IAF_MCC) June 10, 2019
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.