ಧಾರವಾಡ: ‘ಮನುಷ್ಯರ ನಡುವೆ ಬಾಂಧವ್ಯ, ಸೌಹಾರ್ದತೆ ಮತ್ತು ಪ್ರೀತಿ ಬೆಳೆಸುವ ಶಕ್ತಿ ರಂಗಭೂಮಿಗೆ ಇದೆ’ ಎಂದು ರಂಗಭೂಮಿ ನಿರ್ದೇಶಕ ಎನ್.ಎಸ್.ಸೇತುರಾಂ ಅಭಿಪ್ರಾಯಪಟ್ಟರು.ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ್ ಮತ್ತು ಅಭಿನಯ ಭಾರತಿ ಸಹಯೋಗದೊಂದಿಗೆ ಧಾರವಾಡದ ಸ್ನೇಹ ಪ್ರಕಾಶನವು ಹನುಮಂತ ಡಂಬಳ ನೆನಪಿನಲ್ಲಿ ಕೊಡಮಾಡುವ ಅಭಿನಯ ಭಾರತಿ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ಅಭಿನಯ ಭಾರತಿ ರಂಗ ಪ್ರಶಸ್ತಿಗಳನ್ನು ಕ್ರಮವಾಗಿ ಬೆಳಗಾವಿಯ ಶ್ರೀಪತಿ ಮಂಜನಬೈಲು ಹಾಗೂ ಕಲಾವಿದೆ ಮಾಲತಿ ಸರದೇಶಪಾಂಡೆ ಅವರಿಗೆ ಭಾನುವಾರ ಪ್ರದಾನ ಮಾಡಿ ಅವರು ಮಾತನಾಡಿದರು.