ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಧವ್ಯ ಬೆಸೆಯುವ ರಂಗಭೂಮಿ

ಶ್ರೀಪತಿ, ಮಾಲತಿಗೆ ಅಭಿನಯ ಭಾರತಿ ಪ್ರಶಸ್ತಿ
Last Updated 2 ಏಪ್ರಿಲ್ 2018, 9:37 IST
ಅಕ್ಷರ ಗಾತ್ರ

ಧಾರವಾಡ: ‘ಮನುಷ್ಯರ ನಡುವೆ ಬಾಂಧವ್ಯ, ಸೌಹಾರ್ದತೆ ಮತ್ತು ಪ್ರೀತಿ ಬೆಳೆಸುವ ಶಕ್ತಿ ರಂಗಭೂಮಿಗೆ ಇದೆ’ ಎಂದು ರಂಗಭೂಮಿ ನಿರ್ದೇಶಕ ಎನ್‌.ಎಸ್‌.ಸೇತುರಾಂ ಅಭಿಪ್ರಾಯಪಟ್ಟರು.ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ್ ಮತ್ತು ಅಭಿನಯ ಭಾರತಿ ಸಹಯೋಗದೊಂದಿಗೆ ಧಾರವಾಡದ ಸ್ನೇಹ ಪ್ರಕಾಶನವು ಹನುಮಂತ ಡಂಬಳ ನೆನಪಿನಲ್ಲಿ ಕೊಡಮಾಡುವ ಅಭಿನಯ ಭಾರತಿ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ಅಭಿನಯ ಭಾರತಿ ರಂಗ ಪ್ರಶಸ್ತಿಗಳನ್ನು ಕ್ರಮವಾಗಿ ಬೆಳಗಾವಿಯ ಶ್ರೀಪತಿ ಮಂಜನಬೈಲು ಹಾಗೂ ಕಲಾವಿದೆ ಮಾಲತಿ ಸರದೇಶಪಾಂಡೆ ಅವರಿಗೆ ಭಾನುವಾರ ಪ್ರದಾನ ಮಾಡಿ ಅವರು ಮಾತನಾಡಿದರು.

‘ಅರ್ಜಿ ಹಾಕಿ ಪ್ರಶಸ್ತಿ ಪಡೆಯುವ ಪರಂಪರೆ ಪ್ರಸ್ತುತ ಇದೆ. ಅನೇಕರು ಅರ್ಜಿ ಹಾಕಿಯೂ ಸಿಗದೆ ನಿರಾಶರಾದ ಉದಾಹರಣೆಗಳೂ ಇವೆ. ಆದರೆ, ಧಾರವಾಡದ ಸಂಸ್ಥೆಯೊಂದು ಅರ್ಹರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಸಂತಸದ ಸಂಗತಿ. ಪ್ರಶಸ್ತಿ ಯಾರಿಗೆ ಬಂದಿದೆ ಎಂಬುದು ಮಾನದಂಡವಲ್ಲ. ಪ್ರಶಸ್ತಿ ನೀಡುತ್ತಿರುವ ಸಂಸ್ಥೆ ಹಾಗೂ ಆಯ್ಕೆ ಸಮಿತಿ ಸದಸ್ಯರು ಬಹಳ ಮುಖ್ಯ. ಸುಸಂಸ್ಕೃತರು ಇದ್ದಲ್ಲಿ ಪ್ರಾಮಾಣಿಕತೆಗೆ ಪ್ರಶಸ್ತಿ ಲಭಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಅಭಿನಯ ಭಾರತಿ ಜೀವಮಾನ ಸಾಧನೆ ಪ್ರಶಸ್ತಿಯು ₹10 ಸಾವಿರ ನಗದು ಹಾಗೂ ಅಭಿನಯ ಭಾರತಿ ರಂಗ ಪ್ರಶಸ್ತಿ ₹ 5 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಪತಿ ಮಂಜನಬೈಲು, ‘ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ಬೆಳಗಾವಿ ಹಾಗೂ ಧಾರವಾಡದ ನನ್ನ ರಂಗಭೂಮಿ ಗೆಳೆಯರಿಗೆ ಈ ಪ್ರಶಸ್ತಿ ಸಲ್ಲಬೇಕು’ ಎಂದರು.

ಪ್ರಶಸ್ತಿ ಪುರಸ್ಕೃತೆ ಮಾಲತಿ ಸರದೇಶಪಾಂಡೆ ಮಾತನಾಡಿ, ‘ಧಾರವಾಡ ನನ್ನ ತವರು. ನಾಟಕದ ಪ್ರಾಥಮಿಕ ಶಿಕ್ಷಣ ಇಲ್ಲೇ ಆಗಿದೆ. ಅದು ಇಂದು ನನ್ನ ಬೆಳವಣಿಗೆಗೆ ಕಾರಣವಾಗಿದೆ. ಹೀಗಾಗಿ ಈ ಮಣ್ಣಿಗೆ ನಾನು ಋಣಿ’ ಎಂದರು.ಹರ್ಷ ಡಂಬಳ ಹಾಗೂ ಅರವಿಂದ ಕುಲಕರ್ಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT