ತನಿಖಾ ದಳದ ವರದಿ ಪ್ರಕಾರ ಜೈಷೆ ಸಂಘಟನೆ ಈಗಾಗಲೇ ಬರಮುಲ್ಲಾ ವಲಯದಲ್ಲಿರುವ ಸೂಕ್ಷ್ಮ ಪ್ರದೇಶಗಳ ಮೇಲೆ ದಾಳಿ ನಡೆಸಲು ಉಗ್ರರನ್ನು ಕಳುಹಿಸಿದೆ. ಈ ಉಗ್ರರು ಬರಮುಲ್ಲಾ ಮತ್ತು ಪಟ್ಟಾನ್ ನಗರದ ನಡುವಿನ ಪ್ರದೇಶಗಳ ಮೇಲೆ ದಾಳಿ ನಡೆಸಲು ಸಂಚು ಹೂಡಿರುವ ಸಾಧ್ಯತೆ ಇದೆ. ಬಿಎಸ್ಎಫ್ ಶಿಬಿರದ ಮೇಲೆ ದಾಳಿ ನಡೆಸಲು ಉಗ್ರರು ಅಲ್ಲಿನ ಸ್ಥಳೀಯರ ಸಹಾಯವನ್ನು ಪಡೆಯಬಹುದು.ಇದೆಲ್ಲದರ ಜತೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿಯೂ ಉಗ್ರ ಕೃತ್ಯ ನಡೆಯುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ ಎಂದು ವರದಿ ಹೇಳಿದೆ.