‘ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನದ ಜೊತೆಗೆ ಮಾತುಕತೆಯೇ ಇಲ್ಲ. ಬದಲಿಗೆ, ಭಯೋತ್ಪಾದನೆಯೇ ಮುಖ್ಯ ವಿಷಯವಾಗಬೇಕು. ನೆರೆರಾಷ್ಟ್ರವೊಂದು ನಮ್ಮ ದೇಶದೊಳಗೆ ಭಯೋತ್ಪಾಕ ಕೃತ್ಯಗಳನ್ನು ನಡೆಸುತ್ತಿದ್ದರೂ ಆ ರಾಷ್ಟ್ರದ ಜೊತೆ ಮಾತುಕತೆಗೆ ಮುಂದಾಗುವ ಯಾವುದಾದರೂ ರಾಷ್ಟ್ರ ವಿಶ್ವದಲ್ಲಿ ಇದೆಯೇ? ನಮ್ಮ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಅಸಹಜತೆ ಇರುವುದು ಅವರ ನಡತೆಯಲ್ಲಿ’ ಎಂದು ಜೈಶಂಕರ್ ಹೇಳಿದರು.