ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ನಂತರ, ಕಳಪೆ ಸಾಧನೆ ತೋರುವ ಅಧಿಕಾರಿಗೆ ನಿವೃತ್ತಿಯಾಗುವಂತೆ ಸೂಚಿಸಲು ಕಾಯ್ದೆಯಡಿ ಅವಕಾಶ ಇದೆ. ಜನರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ, ನಿವೃತ್ತನಾಗ ಬಯಸುವ ಅಧಿಕಾರಿ ಮೂರು ತಿಂಗಳ ಮುಂಚಿತವಾಗಿ ಸರ್ಕಾರಕ್ಕೆ ಲಿಖಿತ ಮಾಹಿತಿ ನೀಡಬೇಕು ಇಲ್ಲವೇ ಮೂರು ತಿಂಗಳ ವೇತನ ಹಾಗೂ ಭತ್ಯೆಗಳನ್ನು ಹಿಂದಿರುಗಿಸಬೇಕು.