ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಗುಹಾ, ‘ಇದು ಕಟ್ಟುಕಥೆ ಎನ್ನುವುದನ್ನು ಪ್ರೊ.ಶ್ರೀನಾಥ್ ರಾಘವ್ ಆಗಲೇ ಸಾಬೀತುಪಡಿಸಿದ್ದಾರೆ. ಸುಳ್ಳುಸುದ್ದಿ ಪ್ರಚಾರ ಮಾಡುವುದು ಹಾಗೂ ಆಧುನಿಕ ಭಾರತದ ನಿರ್ಮಾತೃಗಳ ನಡುವೆ ಶತ್ರುತ್ವ ಇತ್ತು ಎಂದು ಕಥೆ ಕಟ್ಟುವುದು ವಿದೇಶಾಂಗ ಸಚಿವರ ಕೆಲಸವಲ್ಲ. ಈ ಕೆಲಸವನ್ನು ಅವರು ಬಿಜೆಪಿಯ ಐ.ಟಿ ಘಟಕಕ್ಕೆ ಬಿಡಬೇಕು’ ಎಂದು ಹೇಳಿದ್ದಾರೆ.