<p><strong>ನವದೆಹಲಿ:</strong> ಜವಾಹರಲಾಲ್ ನೆಹರು ಸಂಪುಟದ ಕರಡು ಪಟ್ಟಿಯಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಹೆಸರಿತ್ತೆ? ಇದು ಗುರುವಾರ ಟ್ವಿಟರ್ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹಾಗೂ ಇತಿಹಾಸತಜ್ಞ ರಾಮಚಂದ್ರ ಗುಹಾ ಅವರ ನಡುವೆ ಭಾರಿ ಚರ್ಚೆಗೆ ಒಳಗಾದ ವಿಷಯವಾಗಿತ್ತು.</p>.<p>ವಿ.ಪಿ.ಮೆನನ್ ಕುರಿತು ನಾರಾಯಣಿ ಬಸು ಅವರು ಬರೆದ ಕೃತಿ ಬಿಡುಗಡೆಗೊಳಿಸಿದ ಬಳಿಕ ಟ್ವೀಟ್ ಮಾಡಿದ್ದ ಜೈಶಂಕರ್ ‘ಪಟೇಲ್ ಅವರು ತಮ್ಮ ಸಂಪುಟದಲ್ಲಿರುವುದು ನೆಹರು ಅವರಿಗೆ ಇಷ್ಟವಿರಲಿಲ್ಲ. ಆದ್ದರಿಂದ ಕರಡು ಪಟ್ಟಿಯಿಂದ ಅವರನ್ನು ಕೈಬಿಟ್ಟಿದ್ದರು ಎಂದು ಈ ಕೃತಿಯಿಂದ ತಿಳಿಯಿತು. ಐತಿಹಾಸಿಕ ವ್ಯಕ್ತಿಗೆ ಸಿಗಬೇಕಿದ್ದ ನ್ಯಾಯ ಈಗ ದೊರಕಿದೆ’ ಎಂದು ಹೇಳಿದ್ದರು.</p>.<p>ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಗುಹಾ, ‘ಇದು ಕಟ್ಟುಕಥೆ ಎನ್ನುವುದನ್ನು ಪ್ರೊ.ಶ್ರೀನಾಥ್ ರಾಘವ್ ಆಗಲೇ ಸಾಬೀತುಪಡಿಸಿದ್ದಾರೆ. ಸುಳ್ಳುಸುದ್ದಿ ಪ್ರಚಾರ ಮಾಡುವುದು ಹಾಗೂ ಆಧುನಿಕ ಭಾರತದ ನಿರ್ಮಾತೃಗಳ ನಡುವೆ ಶತ್ರುತ್ವ ಇತ್ತು ಎಂದು ಕಥೆ ಕಟ್ಟುವುದು ವಿದೇಶಾಂಗ ಸಚಿವರ ಕೆಲಸವಲ್ಲ. ಈ ಕೆಲಸವನ್ನು ಅವರು ಬಿಜೆಪಿಯ ಐ.ಟಿ ಘಟಕಕ್ಕೆ ಬಿಡಬೇಕು’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಜವಾಹರಲಾಲ್ ನೆಹರು ಸಂಪುಟದ ಕರಡು ಪಟ್ಟಿಯಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಹೆಸರಿತ್ತೆ? ಇದು ಗುರುವಾರ ಟ್ವಿಟರ್ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹಾಗೂ ಇತಿಹಾಸತಜ್ಞ ರಾಮಚಂದ್ರ ಗುಹಾ ಅವರ ನಡುವೆ ಭಾರಿ ಚರ್ಚೆಗೆ ಒಳಗಾದ ವಿಷಯವಾಗಿತ್ತು.</p>.<p>ವಿ.ಪಿ.ಮೆನನ್ ಕುರಿತು ನಾರಾಯಣಿ ಬಸು ಅವರು ಬರೆದ ಕೃತಿ ಬಿಡುಗಡೆಗೊಳಿಸಿದ ಬಳಿಕ ಟ್ವೀಟ್ ಮಾಡಿದ್ದ ಜೈಶಂಕರ್ ‘ಪಟೇಲ್ ಅವರು ತಮ್ಮ ಸಂಪುಟದಲ್ಲಿರುವುದು ನೆಹರು ಅವರಿಗೆ ಇಷ್ಟವಿರಲಿಲ್ಲ. ಆದ್ದರಿಂದ ಕರಡು ಪಟ್ಟಿಯಿಂದ ಅವರನ್ನು ಕೈಬಿಟ್ಟಿದ್ದರು ಎಂದು ಈ ಕೃತಿಯಿಂದ ತಿಳಿಯಿತು. ಐತಿಹಾಸಿಕ ವ್ಯಕ್ತಿಗೆ ಸಿಗಬೇಕಿದ್ದ ನ್ಯಾಯ ಈಗ ದೊರಕಿದೆ’ ಎಂದು ಹೇಳಿದ್ದರು.</p>.<p>ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಗುಹಾ, ‘ಇದು ಕಟ್ಟುಕಥೆ ಎನ್ನುವುದನ್ನು ಪ್ರೊ.ಶ್ರೀನಾಥ್ ರಾಘವ್ ಆಗಲೇ ಸಾಬೀತುಪಡಿಸಿದ್ದಾರೆ. ಸುಳ್ಳುಸುದ್ದಿ ಪ್ರಚಾರ ಮಾಡುವುದು ಹಾಗೂ ಆಧುನಿಕ ಭಾರತದ ನಿರ್ಮಾತೃಗಳ ನಡುವೆ ಶತ್ರುತ್ವ ಇತ್ತು ಎಂದು ಕಥೆ ಕಟ್ಟುವುದು ವಿದೇಶಾಂಗ ಸಚಿವರ ಕೆಲಸವಲ್ಲ. ಈ ಕೆಲಸವನ್ನು ಅವರು ಬಿಜೆಪಿಯ ಐ.ಟಿ ಘಟಕಕ್ಕೆ ಬಿಡಬೇಕು’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>