<p><strong>ಮುಂಬೈ:</strong> ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ನ ಸಿಬ್ಬಂದಿ ಸೋಮವಾರ ಕರೆ ನೀಡಿದ್ದ ಮುಷ್ಕರವನ್ನು ಭಾನುವಾರ ರಾತ್ರಿ ಕೈಬಿಟ್ಟಿದ್ದಾರೆ.</p>.<p>ಸಂಸ್ಥೆಯ ಆಡಳಿತ ಮಂಡಳಿ ಮತ್ತು ಎಸ್ಬಿಐ ಮಧ್ಯೆ ಸೋಮವಾರ ಮಹತ್ವದ ಸಭೆ ನಡೆಯಲಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.</p>.<p>ಜನವರಿಯಿಂದ ವೇತನ ಪಾವತಿ ಮಾಡದಿರುವುದನ್ನು ವಿರೋಧಿಸಿ ಪೈಲಟ್ ಮತ್ತು ಇತರ ಸಿಬ್ಬಂದಿ ಮುಷ್ಕರ ನಡೆಸುವುದಾಗಿ ತಿಳಿಸಿದ್ದರು. ಸಂಸ್ಥೆಯು ಈಗಾಗಲೇ ಹಲವಾರು ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ರದ್ದುಪಡಿಸಿದೆ. ಜೂನ್ 10ರವರೆಗೆ ಮುಂಗಡ ಟಿಕೆಟ್ ಕಾದಿರಿಸುವುದನ್ನೂ ಸ್ಥಗಿತಗೊಳಿಸಿದೆ. 120 ವಿಮಾನಗಳ ಪೈಕಿ ಕೇವಲ 7 ವಿಮಾನಗಳು ಹಾರಾಟ ನಡೆಸುತ್ತಿವೆ.</p>.<p>ಸಂಸ್ಥೆಯ ಪಾಲು ಬಂಡವಾಳ ಮಾರಾಟಕ್ಕೆ ನಡೆಯುತ್ತಿರುವ ಹರಾಜಿನಲ್ಲಿ ಭಾಗವಹಿಸಿರುವ ಎತಿಹಾದ್ ಏರ್ವೇಸ್ ತನ್ನ ಪಾಲು ಬಂಡವಾಳವನ್ನು ಶೇ 24ರಿಂದ ಶೇ 75ರಷ್ಟಕ್ಕೆ ಹೆಚ್ಚಿಸಲು ಮುಂದಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಎರವಾಗಿರುವ ಸಂಸ್ಥೆಯ ಸ್ಥಾಪಕ ನರೇಶ್ ಗೋಯಲ್ ಅವರೂ ಬಿಡ್ನಲ್ಲಿ ಭಾಗಿಯಾಗಿದ್ದಾರೆ.</p>.<p>ಮಾರ್ಚ್ ತಿಂಗಳಿನಲ್ಲಿ ಪ್ರಕಟಿಸಲಾದ ಸಾಲ ಹೊಂದಾಣಿಕೆಯಡಿ ಬ್ಯಾಂಕ್ ಒಕ್ಕೂಟದಿಂದ ಸಂಸ್ಥೆಗೆ ಬರಬೇಕಾದ ₹ 1,500 ಕೋಟಿ ಬಂಡವಾಳದ ನೆರವು ಇದುವರೆಗೂ ಕಾರ್ಯಗತಗೊಂಡಿಲ್ಲ.</p>.<p class="Subhead"><strong>ರಾಜೀನಾಮೆ:</strong> ಸಂಸ್ಥೆಯ ಸ್ವತಂತ್ರ ನಿರ್ದೇಶಕಿ ರಾಜಶ್ರೀ ಪಾಥಿ ಅವರು ಇತರ ಕೆಲಸಗಳ ಒತ್ತಡಗಳ ಕಾರಣ ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ನ ಸಿಬ್ಬಂದಿ ಸೋಮವಾರ ಕರೆ ನೀಡಿದ್ದ ಮುಷ್ಕರವನ್ನು ಭಾನುವಾರ ರಾತ್ರಿ ಕೈಬಿಟ್ಟಿದ್ದಾರೆ.</p>.<p>ಸಂಸ್ಥೆಯ ಆಡಳಿತ ಮಂಡಳಿ ಮತ್ತು ಎಸ್ಬಿಐ ಮಧ್ಯೆ ಸೋಮವಾರ ಮಹತ್ವದ ಸಭೆ ನಡೆಯಲಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.</p>.<p>ಜನವರಿಯಿಂದ ವೇತನ ಪಾವತಿ ಮಾಡದಿರುವುದನ್ನು ವಿರೋಧಿಸಿ ಪೈಲಟ್ ಮತ್ತು ಇತರ ಸಿಬ್ಬಂದಿ ಮುಷ್ಕರ ನಡೆಸುವುದಾಗಿ ತಿಳಿಸಿದ್ದರು. ಸಂಸ್ಥೆಯು ಈಗಾಗಲೇ ಹಲವಾರು ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ರದ್ದುಪಡಿಸಿದೆ. ಜೂನ್ 10ರವರೆಗೆ ಮುಂಗಡ ಟಿಕೆಟ್ ಕಾದಿರಿಸುವುದನ್ನೂ ಸ್ಥಗಿತಗೊಳಿಸಿದೆ. 120 ವಿಮಾನಗಳ ಪೈಕಿ ಕೇವಲ 7 ವಿಮಾನಗಳು ಹಾರಾಟ ನಡೆಸುತ್ತಿವೆ.</p>.<p>ಸಂಸ್ಥೆಯ ಪಾಲು ಬಂಡವಾಳ ಮಾರಾಟಕ್ಕೆ ನಡೆಯುತ್ತಿರುವ ಹರಾಜಿನಲ್ಲಿ ಭಾಗವಹಿಸಿರುವ ಎತಿಹಾದ್ ಏರ್ವೇಸ್ ತನ್ನ ಪಾಲು ಬಂಡವಾಳವನ್ನು ಶೇ 24ರಿಂದ ಶೇ 75ರಷ್ಟಕ್ಕೆ ಹೆಚ್ಚಿಸಲು ಮುಂದಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಎರವಾಗಿರುವ ಸಂಸ್ಥೆಯ ಸ್ಥಾಪಕ ನರೇಶ್ ಗೋಯಲ್ ಅವರೂ ಬಿಡ್ನಲ್ಲಿ ಭಾಗಿಯಾಗಿದ್ದಾರೆ.</p>.<p>ಮಾರ್ಚ್ ತಿಂಗಳಿನಲ್ಲಿ ಪ್ರಕಟಿಸಲಾದ ಸಾಲ ಹೊಂದಾಣಿಕೆಯಡಿ ಬ್ಯಾಂಕ್ ಒಕ್ಕೂಟದಿಂದ ಸಂಸ್ಥೆಗೆ ಬರಬೇಕಾದ ₹ 1,500 ಕೋಟಿ ಬಂಡವಾಳದ ನೆರವು ಇದುವರೆಗೂ ಕಾರ್ಯಗತಗೊಂಡಿಲ್ಲ.</p>.<p class="Subhead"><strong>ರಾಜೀನಾಮೆ:</strong> ಸಂಸ್ಥೆಯ ಸ್ವತಂತ್ರ ನಿರ್ದೇಶಕಿ ರಾಜಶ್ರೀ ಪಾಥಿ ಅವರು ಇತರ ಕೆಲಸಗಳ ಒತ್ತಡಗಳ ಕಾರಣ ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>