‘ರಾಜ್ಯದಲ್ಲಿ ಇದುವರೆಗೆ ಸೋಂಕಿನ ಸಮುದಾಯ ಪ್ರಸರಣೆ ಕಂಡು ಬಂದಿಲ್ಲ. ಆದರೆ ಅದು ಎಂದಿಗೂ ಸಂಭವಿಸುವುದಿಲ್ಲ ಎಂದು ನಾನು ಹೇಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಸೋಂಕು ಪತ್ತೆ ಪರೀಕ್ಷೆಗೆ ಸಂಬಂಧಿಸಿದಂತೆ ನಾವು ಐಸಿಎಂಆರ್ ನಿರ್ದೇಶನಗಳನ್ನು ಶ್ರದ್ಧೆಯಿಂದ ಅನುಸರಿಸುತ್ತಿದ್ದೇವೆ. ಐಸಿಎಂಆರ್ ಪ್ರತಿಕಾಯ (ಆ್ಯಂಟಿ ಬಾಡಿ) ಪರೀಕ್ಷೆಗೆ ಸೂಚನೆ ನೀಡಿದೆಯಾದರೂ, ಅದು ಒದಗಿಸಿರುವ ಪರೀಕ್ಷಾ ಕಿಟ್ಗಳು ಉತ್ತಮವಾಗಿಲ್ಲ,’ ಎಂದು ಅವರು ಹೇಳಿದ್ದಾರೆ.