ಹಣಕಾಸು ಸಚಿವ ಬುಗ್ಗಣಾ ರಾಜೇಂದ್ರನಾಥ್ ನೇತೃತ್ವದ ಸಮಿತಿಯು,2014ರಲ್ಲಿ ಆಂಧ್ರಪ್ರದೇಶ ರಾಜ್ಯ ರಚನೆಯಾದ ನಂತರ ಸರ್ಕಾರದ ನೀತಿ, ಯೋಜನೆ, ಕಾರ್ಯಕ್ರಮ, ಕಂಪನಿಗಳ ರಚನೆ ಹಾಗೂ ಆಡಳಿತಾತ್ಮಕವಾಗಿ ಕೈಗೊಂಡಿರುವ ನಿರ್ಧಾರಗಳು ಸರ್ಕಾರದ ಮೇಲೆ ಬೀರಿರುವ ಪರಿಣಾಮಗಳ ಕುರಿತು ಪರಿಶೀಲನೆ ನಡೆಸಿ ಡಿಸೆಂಬರ್ನಲ್ಲಿ ವರದಿ ನೀಡಿತ್ತು.