ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‍ಡೌನ್ ವಿಸ್ತರಣೆಯಿಂದ ವೈದ್ಯಕೀಯ ಬಿಕ್ಕಟ್ಟು ಉಂಟಾಗುತ್ತದೆ: ಆನಂದ್ ಮಹೀಂದ್ರಾ

Last Updated 25 ಮೇ 2020, 15:35 IST
ಅಕ್ಷರ ಗಾತ್ರ

ನವದೆಹಲಿ: ಲಾಕ್‌ಡೌನ್ ವಿಸ್ತರಣೆ ಮಾಡುವುದರಿಂದ ಆರ್ಥಿಕ ಸಮಸ್ಯೆಮಾತ್ರವಲ್ಲದೆ ವೈದ್ಯಕೀಯ ಬಿಕ್ಕಟ್ಟು ಉಂಟಾಗುತ್ತದೆ ಎಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಹೇಳಿದ್ದಾರೆ.

ಅಧಿಕಾರದಲ್ಲಿರುವವರಿಗೆ ಈ ರೀತಿಯ ಆಯ್ಕೆಗಳು ಸುಲಭವಲ್ಲದೇ ಇದ್ದರೂ ಲಾಕ್‍ಡೌನ್ ವಿಸ್ತರಣೆ ಸಹಕಾರಿಯಾಗುವುದಿಲ್ಲ.
ನಾನು ಈ ಹಿಂದೆ ಟ್ವೀಟ್ ಮಾಡಿದಂತೆ ಲಾಕ್‍ಡೌನ್ ವಿಸ್ತರಣೆಯಿಂದ ಆರ್ಥಿಕ ಸಂಕಷ್ಟ ಮಾತ್ರ ಅಲ್ಲ ವೈದ್ಯಕೀಯ ಬಿಕ್ಕಟ್ಟು ಕೂಡಾ ತಲೆದೋರುತ್ತದೆ ಎಂದು ಮಹೀಂದ್ರಾ ಅವರು ಟ್ವೀಟ್ ಮಾಡಿದ್ದಾರೆ.

ಲಾಕ್‍ಡೌನ್‌‌ನಿಂದಾಗುವ ಮಾನಸಿಕ ಪರಿಣಾಮ ಮತ್ತು ಕೋವಿಡ್ -19 ರೋಗ ಇಲ್ಲದೇ ಇರುವ ರೋಗಿಗಳನ್ನ ಕಡೆಗಣಿಸುವುದರಿಂದ ಉಂಟಾಗುವ ಸಮಸ್ಯೆಯ ಬಗ್ಗೆ ಹೇಳಿರುವ ಲೇಖನವೊಂದನ್ನು ಉಲ್ಲೇಖಿಸಿ ಅವರು ಈ ರೀತಿ ಟ್ವೀಟಿಸಿದ್ದಾರೆ.

49 ದಿನಗಳ ನಂತರ ಲಾಕ್‍ಡೌನ್ ವಿಸ್ತರಣೆ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದ ಮಹೀಂದ್ರಾ ಅವರು ಅಧಿಕಾರದಲ್ಲಿರುವವರಿಗೆ ಈ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭವೇನಲ್ಲ ಆದರೆ ಲಾಕ್‍ಡೌನ್ ವಿಸ್ತರಣೆಯಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದಿದ್ದಾರೆ.

ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಲೇ ಇವೆ. ಹಾಗಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆ ಮತ್ತು ಆಕ್ಸಿಜನ್ ಲೈನ್‌ಗಳ ಸಂಖ್ಯೆ ಹೆಚ್ಚು ಮಾಡಬೇಕಿದೆ. ಈ ಬಗ್ಗೆ ಸೇನೆಗೆ ಅಗಾಧ ಅರಿವು ಇದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT