ಭಾನುವಾರ ನಡೆದ ಕೊನೆಯ ಹಂತದ ಮತದಾನದ ವೇಳೆ ನಾಡ ಬಾಂಬ್ಗಳು ಸಿಡಿದಿವೆ. ತಮ್ಮ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿಯ ಅಭ್ಯರ್ಥಿಗಳು ಆರೋಪಿಸಿದ್ದಾರೆ. ‘ಟಿಎಂಸಿಯ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ
ನಡೆಸಿ, ಶಾಲಾ ಕಟ್ಟಡದೊಳಗೆ ಕೂಡಿ ಹಾಕಿದ್ದರು’ ಎಂದು ಕೋಲ್ಕತ್ತ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಹುಲ್ ಸಿನ್ಹಾ ಆರೋಪಿಸಿದ್ದಾರೆ.