ಪುದುಚ್ಚೇರಿ:ಪುದುಚ್ಚೇರಿ ಲೆ.ಗವರ್ನರ್ ಕಿರಣ್ ಬೇಡಿ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರದ ದೈನಂದಿನ ಕಾರ್ಯದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದು ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ ಮಂಗಳವಾರ ಆದೇಶ ನೀಡಿದೆ.
ಸರ್ಕಾರದ ದೈನಂದಿನ ಕಾರ್ಯ ಚಟುವಟಿಕೆಗಳ ಕಡತವನ್ನು ತರಿಸಿಕೊಳ್ಳುವುದು ಮತ್ತು ಅಧಿಕಾರಿಗಳಿಗೆ ಆದೇಶವನ್ನು ನೀಡುವ ಅಧಿಕಾರ ಕಿರಣ್ ಬೇಡಿಗೆ ಇಲ್ಲ ಎಂದುನ್ಯಾಯಾಲಯ ಹೇಳಿದೆ.
ಮೇ 2016ರಲ್ಲಿ ಕಿರಣ್ ಬೇಡಿ ಅಧಿಕಾರ ವಹಿಸಿದಂದಿನಿಂದಪುದುಚ್ಚೇರಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿಯೊಂದಿಗೆ ದ್ವೇಷ ಸಾಧಿಸಿಕೊಂಡೇ ಬಂದಿದ್ದಾರೆ.
ಸಚಿವ ಸಂಪುಟವಿರುವಾಗಲೂ ಲೆ.ಗವರ್ನರ್ ಸರ್ಕಾರದ ದೈನಂದಿನ ಚಟುವಟಿಕೆಗಳಲ್ಲಿ ಅಧಿಕಾರ ಚಲಾಯಿಸುತ್ತಿರುವುದನ್ನು ಪ್ರಶ್ನಿಸಿ 2017ರಲ್ಲಿ ಪುದುಚ್ಚೇರಿಯ ಕಾಂಗ್ರೆಸ್ ಶಾಸಕ ಲಕ್ಷ್ಮಿನಾರಾಯಣನ್ ನ್ಯಾಯಾಲಯದ ಮೆಟ್ಟಿಲೇರಿದ್ದರು.