ಕೋಲ್ಕತ್ತ : ’ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಕುರಿತು ನವದೆಹಲಿಯಲ್ಲಿ ಜನವರಿ 17ರಂದು ಕೇಂದ್ರ ಸರ್ಕಾರ ಕರೆದಿರುವ ಸಭೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಯಾವುದೇ ಪ್ರತಿನಿಧಿ ಪಾಲ್ಗೊಳ್ಳುವುದಿಲ್ಲ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
’ಕೇಂದ್ರ ಸರ್ಕಾರ ಸೂಚನೆ ಪಾಲಿಸದಿದ್ದಕ್ಕಾಗಿ ರಾಜ್ಯ ಸರ್ಕಾರವನ್ನು ವಜಾಗೊಳಿಸುವ ಧೈರ್ಯವನ್ನು ರಾಜ್ಯಪಾಲರು ತೋರಲಿ. ಆದರೆ, ನಾನು ಸಿಎಎ–ಎನ್ಪಿಆರ್–ಎನ್ಆರ್ಸಿಗೆ ಅವಕಾಶ ನೀಡುವುದಿಲ್ಲ‘ ಎಂದು ಬುಧವಾರ ನಡೆದ ರ್ಯಾಲಿಯಲ್ಲಿ ಹೇಳಿದ್ದಾರೆ.