‘ಮತ ಮಾರಿಕೊಳ್ಳಬೇಡಿ’: ‘ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ಕೇವಲ ₹1 ಲಕ್ಷ ಮಾತ್ರ ಖರ್ಚು ಮಾಡಲು ನಿರ್ಧರಿಸಿರುವೆ. ಆದರೆ, ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಕೋಟಿ ಕೋಟಿ ಖರ್ಚು ಮಾಡಿ, ಗೆದ್ದ ಬಳಿಕ ಆ ಹಣವನ್ನೆಲ್ಲಾ ಅನ್ಯಮಾರ್ಗದಲ್ಲಿ ಗಳಿಸಲು ತುದಿಗಾಲ ಮೇಲೆ ನಿಂತಿದ್ದಾರೆ’ ಎಂದು ದೂರಿದರು. ‘ಹಣ, ಮದ್ಯಕ್ಕೆ ಯಾರೂ ಮತ ಮಾರಿಕೊಳ್ಳಬೇಡಿ’ ಎಂದು ಕೋರಿದರು.