‘ಲೈಂಗಿಕ ಕಾರ್ಯಕರ್ತೆಯರು ಬಹಳಷ್ಟು ಕಿರುಕುಳ ಮತ್ತು ಶೋಷಣೆ ಎದುರಿಸುತ್ತಿದ್ದಾರೆ. ಕೆಲವೊಮ್ಮೆ ಇದು ತೀವ್ರವಾದಾಗ ಖಿನ್ನತೆ, ಮಾನಸಿಕ ಯಾತನೆ ಮತ್ತು ಆತ್ಮಹತ್ಯೆಗೆ ಕಾರಣವಾಗುತ್ತದೆ. ಆದ್ದರಿಂದ ಅವರ ಮಾನಸಿಕ ಆರೋಗ್ಯದ ಸಂಪೂರ್ಣ ಮಾಹಿತಿ ಪಡೆದು ಚಿಕಿತ್ಸೆ ನೀಡಲು ಶ್ರಮಿಸುತ್ತಿದ್ದೇವೆ’ ಎಂದು ಸೋನಾಗಚ್ಚಿ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ (ಎಸ್ಆರ್ಟಿಐ) ಮುಖ್ಯಸ್ಥ ಸಮರ್ಜಿತ್ ಜನಾ ತಿಳಿಸಿದ್ದಾರೆ.