ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮೋದಿಯೇ ಹೋಗಿ ದೇಶದ ಗಡಿಯಲ್ಲಿ ಯುದ್ಧ ಮಾಡುತ್ತಾರೆ ಎಂಬಂತಿರುತ್ತದೆ ಅವರ ಭಾಷಣ'

Last Updated 19 ಮಾರ್ಚ್ 2019, 3:54 IST
ಅಕ್ಷರ ಗಾತ್ರ

ನೆಡುಕ್ಕಂಡಂ: ದೇಶ ರಕ್ಷಣೆಯ ವಿಷಯವನ್ನು ಹೇಳಿ ಮತ ಯಾಚಿಸುತ್ತಿರುವ ಮೋದಿಯ ಭಾಷಣ ಕೇಳಿದರೆ, ಅವರೇ ಹೋಗಿ ದೇಶದ ಗಡಿಯಲ್ಲಿ ಯುದ್ಧ ಮಾಡುತ್ತಾರೆ ಎಂಬಂತಿರುತ್ತದೆ ಎಂದು ಕೇರಳದ ಸಚಿವ ಎಂ.ಎಂ. ಮಾಣಿ ಹೇಳಿದ್ದಾರೆ.

ಇಡುಕ್ಕಿಯಉಡುಂಬನ್‍ಚೋಲಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಣಿ, ದೇಶದ ಹೆಮ್ಮೆಯ ಯೋಧರು ತಮ್ಮ ಜೀವನವನ್ನು ಮುಡಿಪಾಗಿಟ್ಟು ನಮ್ಮ ದೇಶ ಕಾಯುತ್ತಾರೆ.ಅವರು ಹೋರಾಡುತ್ತಿರುವುದ ದೇಶದಲ್ಲಿರುವ ಜನರ ಸುರಕ್ಷೆಗಾಗಿ ಆಗಿದೆ. ಭಯೋತ್ಪಾದನೆ ವಿರುದ್ಧ ಹೋರಾಡುವ ಯೋಧರು ಬಿಜೆಪಿ ಮತ್ತು ನರೇಂದ್ರ ಮೋದಿ ಪರ ಹೋರಾಡುತ್ತಾರೆ ಎಂಬ ರೀತಿಯಲ್ಲಿ ಪ್ರಚಾರ ಮಾಡಲಾಗುತ್ತದೆ.

ಗುಜರಾತ್ ಹಿಂಸಾಚಾರಕ್ಕೆ ನೇತೃತ್ವ ನೀಡಿದ್ದಕ್ಕಾಗಿ ಆರ್‌ಎಸ್ಎಸ್, ಮೋದಿಯನ್ನು ಪ್ರಧಾನ ಮಂತ್ರಿಯನ್ನಾಗಿಯೂ ಅಮಿತ್ ಶಾ ಅವರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದೆ ಎಂದು ಮಾಣಿ ಹೇಳಿರುವುದಾಗಿ ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT