ಸಾಮಾನ್ಯವಾಗಿ ಜೂನ್ 1ರಂದು ಕೇರಳ ಪ್ರವೇಶಿಸುವ ಮುಂಗಾರು ಪಶ್ಚಿಮ ರಾಜಸ್ಥಾನದ ಶ್ರೀಗಂಗಾನಗರಕ್ಕೆ ತಲುಪಲು 45 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದರೆ, ಈ ವರ್ಷ, ಒಂದು ವಾರ ಮೊದಲೇ ತಲುಪುವ ನಿರೀಕ್ಷೆ ಇತ್ತು. ಜತೆಗೆ ಇಡೀ ದೇಶದಾದ್ಯಂತ ಜುಲೈ 8ರ ಒಳಗೆಯೇ ವ್ಯಾಪಿಸಲಿದೆ ಎಂದು ನಿರೀಕ್ಷಿಸಲಾಗಿತ್ತು ಎಂದು ಹವಾಮಾನ ಇಲಾಖೆ ವಿವರಿಸಿದೆ.