ನಾಪೋಕ್ಲು: ಇಲ್ಲಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ಟೂರ್ನಿಯ ಶುಕ್ರವಾರದ ಪಂದ್ಯಗಳಲ್ಲಿ ಪುದಿಯೊಕ್ಕಡ, ಶಿವಚಾಳಿಯಂಡ, ಮಾತಂಡ, ಕೊಟ್ಟಂಗಡ, ಶಾಂತೇಯಂಡ, ಚೀಯಕಪೂವಂಡ, ಕೊಂಡೀರ, ಕಂಬೀರಂಡ, ಅರಮಣಮಾಡ, ಕಾಯಪಂಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.
ಪುದಿಯೊಕ್ಕಡ ಮತ್ತು ಕೇಟೋಳೀರ ತಂಡಗಳ ನಡುವಿನ ಪಂದ್ಯದಲ್ಲಿ ಪುದಿಯೊಕ್ಕಡ ತಂಡವು ಕೇಟೋಳಿರ ತಂಡವನ್ನು 3–0 ಗೋಲಿನಿಂದ ಮಣಿಸಿತು. ಪುದಿಯೊಕ್ಕಡ ತಂಡದ ಮಾಚಯ್ಯ, ಮಿಥನ್ಪೊನ್ನಪ್ಪ, ವಿಪಿನ್ ಸೋಮಯ್ಯ ತಲಾ ಒಂದೊಂದು ಗೋಲು ದಾಖಲಿಸಿದರು.
ಶಿವಚಾಳಿಯಂಡ ಮತ್ತು ಮೂಕಳೇರ ತಂಡಗಳ ನಡುವಿನ ಪಂದ್ಯದಲ್ಲಿ ಶಿವಚಾಳಿಯಂಡ ತಂಡವು ಮೂಕಳೇರ ತಂಡವನ್ನು ಟೈಬ್ರೇಕರ್ನ 5–3 ಗೋಲಿನಿಂದ ಪರಾಭವಗೊಳಿಸಿತು. ಮಾತಂಡ ಮತ್ತು ಚೆರುವಾಳಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಾತಂಡ ತಂಡವು ಚೆರುವಾಳಂಡ ತಂಡವನ್ನು ಟೈಬ್ರೇಕರ್ನ 5–4 ಗೋಲಿನಿಂದ ಸೋಲಿಸಿತು.
ಕೊಟ್ಟಂಗಡ ಮತ್ತು ಕಾಟುಮಣಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೊಟ್ಟಂಗಡ ತಂಡವು ಕಾಟುಮಣಿಯಂಡ ತಂಡವನ್ನು 3–0 ಗೋಲಿನಿಂದ ಸೋಲಿಸಿತು. ಕೊಟ್ಟಂಗಡ ತಂಡದ ರೋಷನ್ ಹ್ಯಾಟ್ರಿಕ್ ಮೂರು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.
ಶಾಂತೇಯಂಡ ಮತ್ತು ಪುಟ್ಟಿಚಂಡ ತಂಡದ ನಡುವಿನ ಪಂದ್ಯದಲ್ಲಿ ಶಾಂತೇಯಂಡ ತಂಡವು ಪುಟ್ಟಿಚಂಡ ತಂಡವನ್ನು 2–1 ಗೋಲಿನಿಂದ ಮಣಿಸಿತು. ಶಾಂತೇಯಂಡ ತಂಡದ ಬಿಪಿನ್ ಹಾಗೂ ವಚನ್ ತಲಾ ಒಂದೊಂದು ಗೋಲು ದಾಖಲಿಸಿದರೆ ಪುಟ್ಟಿಚಂಡ ತಂಡದ ಸುಬ್ರಮಣಿ ಒಂದು ಗೋಲು ದಾಖಲಿಸಿದರು.
ಮೀದೇರಿರ ತಂಡದ ಗೈರು ಹಾಜರಿಯಿಂದ ಚೀಯಕಪೂವಂಡ ತಂಡವು ಮುಂದಿನ ಸುತ್ತು ಪ್ರವೇಶಿಸಿತು. ಕೊಂಡೀರ ಮತ್ತು ಬಾಚಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಕೊಂಡೀರ ತಂಡವು ಬಾಚಂಗಡ ತಂಡವನ್ನು 5–0 ಗೋಲಿನಿಂದ ಸೋಲಿಸಿತು. ಕೊಂಡೀರ ತಂಡದ ತಮ್ಮಯ್ಯ, ಕೀರ್ತಿಮುತ್ತಪ್ಪ ತಲಾ ಎರಡೆರಡು ಗೋಲು ದಾಖಲಿಸಿದರೆ ನಿಖಿಲ್ ಅಪ್ಪಯ್ಯ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.
ಕಂಬೀರಂಡ ಮತ್ತು ಕರ್ತಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಕಂಬೀರಂಡ ತಂಡವು ಕರ್ತಮಾಡ ತಂಡವನ್ನು 2–0 ಗೋಲಿನಿಂದ ಸೋಲಿಸಿತು. ತಂಡದ ಮಯೂರ್ ಬೋಪಯ್ಯ, ರಾಯ್ಜಗದೀಶ್ ತಲಾ ಒಂದೊಂದು ಗೋಲು ದಾಖಲಿಸಿದರು. ಬಾರಿಯಂಡ ಮತ್ತು ಅರಮಣಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಅರಮಣಮಾಡ ತಂಡವು ಬಾರಿಯಂಡ ತಂಡವನ್ನು 1–0 ಗೋಲಿನಿಂದ ಪರಾಭವಗೊಳಿಸಿತು.
ಅರಮಣಮಾಡ ತಂಡದ ಚರ್ಮಣ್ಣ ಒಂದು ಗೋಲು ಹೊಡೆದರು. ಕಾಯಪಂಡ ಮತ್ತು ಚಟ್ಟಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಯಪಂಡ ತಂಡವು ಚಟ್ಟಂಗಡ ತಂಡವನ್ನು 2–0 ಗೋಲಿನ ಅಂತರದಿಂದ ಸೋಲಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.