ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಲ್ ಟ್ವೀಟ್ | ಬಿಜೆಪಿ ತಲೆಗೆ ಗುರಿಯಿಟ್ಟ ಶಿವಸೇನೆಯ ಬಾಣ

Last Updated 30 ಅಕ್ಟೋಬರ್ 2019, 2:34 IST
ಅಕ್ಷರ ಗಾತ್ರ

ಮುಂಬೈ: ಶರದ್ ಪವಾರ್ ನೇತೃತ್ವದ ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ವಕ್ತಾರ ಕ್ಲೈಡೆ ಕಾಸ್ಟ್ರೊ ಮಾಡಿರುವ ವ್ಯಂಗ್ಯಚಿತ್ರದ ಟ್ವೀಟ್ ದೇಶದ ಗಮನ ಸೆಳೆದಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಎರಡೂ ಪಕ್ಷಗಳ ನಡುವೆ ಅಧಿಕಾರಕ್ಕಾಗಿ ಹಗ್ಗಜಗ್ಗಾಟ ಆರಂಭವಾಗಿದೆ. ಬಿಜೆಪಿ-ಶಿವಸೇನಾ ನಾಯಕರು ಪರಸ್ಪರ ರಾಜಕೀಯ ಕೆಸರೆರೆಚಾಟದಲ್ಲಿ ತೊಡಗಿದ್ದಾರೆ.

ಈ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು ಪ್ರತಿಪಕ್ಷ ಎನ್ ಸಿಪಿ ವ್ಯಂಗ್ಯಚಿತ್ರವನ್ನು ಟ್ವೀಟ್ ಮಾಡಿದೆ. ಬಿಜೆಪಿಯ ಮಿತ್ರಪಕ್ಷ ಶಿವಸೇನೆಯ ಚುನಾವಣಾ ಗುರುತು ಬಿಲ್ಲುಬಾಣ. ಬಿಲ್ಲಿಗೆ ಹೂಡಿರುವ ಬಾಣವು ನೇರವಾಗಿ ಬಿಜೆಪಿಯ ಗುರುತು ಕಮಲಕ್ಕೆ ಗುರಿಯಿಟ್ಟಿದೆ. ಬಿಲ್ಲಿನಿಂದ ಬಾಣ ಚಿಮ್ಮಿದರೆ ಕಮಲ ಛಿದ್ರವಾಗುತ್ತೆ ಎನ್ನುವುದನ್ನು ಈ ವ್ಯಂಗ್ಯಚಿತ್ರ ಪರೋಕ್ಷವಾಗಿ ಸೂಚಿಸುತ್ತಿದೆ. ವ್ಯಂಗ್ಯಚಿತ್ರದ ಜೊತೆಗೆ ಹಾಕಿರುವ ಒಕ್ಕಣೆಯಲ್ಲಿ ಕ್ರಾಸ್ಟೊ, 'ನಿಮ್ಮ ತಲೆ ಮೇಲೆ ಕತ್ತಿ ತೂಗುತ್ತಿದೆ' ಎಂದು ಮರಾಠಿಯಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT