ಈ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು ಪ್ರತಿಪಕ್ಷ ಎನ್ ಸಿಪಿ ವ್ಯಂಗ್ಯಚಿತ್ರವನ್ನು ಟ್ವೀಟ್ ಮಾಡಿದೆ. ಬಿಜೆಪಿಯ ಮಿತ್ರಪಕ್ಷ ಶಿವಸೇನೆಯ ಚುನಾವಣಾ ಗುರುತು ಬಿಲ್ಲುಬಾಣ. ಬಿಲ್ಲಿಗೆ ಹೂಡಿರುವ ಬಾಣವು ನೇರವಾಗಿ ಬಿಜೆಪಿಯ ಗುರುತು ಕಮಲಕ್ಕೆ ಗುರಿಯಿಟ್ಟಿದೆ. ಬಿಲ್ಲಿನಿಂದ ಬಾಣ ಚಿಮ್ಮಿದರೆ ಕಮಲ ಛಿದ್ರವಾಗುತ್ತೆ ಎನ್ನುವುದನ್ನು ಈ ವ್ಯಂಗ್ಯಚಿತ್ರ ಪರೋಕ್ಷವಾಗಿ ಸೂಚಿಸುತ್ತಿದೆ. ವ್ಯಂಗ್ಯಚಿತ್ರದ ಜೊತೆಗೆ ಹಾಕಿರುವ ಒಕ್ಕಣೆಯಲ್ಲಿ ಕ್ರಾಸ್ಟೊ, 'ನಿಮ್ಮ ತಲೆ ಮೇಲೆ ಕತ್ತಿ ತೂಗುತ್ತಿದೆ' ಎಂದು ಮರಾಠಿಯಲ್ಲಿ ಬರೆದಿದ್ದಾರೆ.