ಇಲ್ಲಿನ ಕುರುಬರ ಓಣಿ, ಮಾಯಮ್ಮನ ಗುಡಿ ಹತ್ತಿರ, ಹರಿಜನ ಓಣಿ, ಹಡಪದರ ಓಣಿ, ಮುಖ್ಯ ಬಜಾರ ಸೇರಿದಂತೆ ಬಹುತೇಕ ಕಡೆ ನೀರಿನ ಸಮಸ್ಯೆ ತಲೆದೋರಿದ್ದು ಕೂಲಿ ಕೆಲಸಕ್ಕೆ ಹೋಗಬೇಕಾದ ಜನರು ಕುಡಿಯುವ ನೀರಿಗಾಗಿ ಕೆಲಸವನ್ನು ಬಿಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿನ ಬಹುತೇಕ ಕುಟುಂಬಗಳು ಸ್ವಂತ ನಳ ಹೊಂದಿದ್ದರೂ ನೀರಿಗಾಗಿ ಚಾತಕ ಪಕ್ಷಿಯಂತೆ ಕಾಯಬೇಕಾದ ಸ್ಥಿತಿಯಿದೆ. ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿಗಾಗಿ ಹೆಚ್ಚಿನ ಬೇಡಿಕೆ ಬರುತ್ತಿದ್ದರೂ ಅಧಿಕಾರಿಗಳು ಮಾತ್ರ ಜಾಗ್ರತೆ ವಹಿಸಿಲ್ಲ ಎಂಬುದು ಅವರ ಆರೋಪವಾಗಿದೆ.