ನವದೆಹಲಿ: ದೇಶದಾದ್ಯಂತ 10 ಜನರನ್ನು ಬಲಿಪಡೆದಿರುವ ಜಾಗತಿಕ ಪಿಡುಗು ಕೋವಿಡ್- 19 ಸೋಂಕು ತಡೆಗಾಗಿ, ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಆದೇಶ ಹೊರಡಿಸಲಾಗಿದೆ. ಈ ವೇಳೆ ಪತ್ರಿಕೆಗಳಿಂದಲೂ ಸೋಂಕು ತಗುಲುತ್ತದೆ ಎಂಬ ವದಂತಿ ಹರಡಿತ್ತು. ಅದನ್ನು ಅಲ್ಲಗಳೆದಿರುವ ಕೇಂದ್ರ ಸರ್ಕಾರ ಪತ್ರಿಕೆಗಳುಸುರಕ್ಷಿತವಾಗಿವೆ ಮತ್ತು ಅವುಗಳ ನಿರಂತರ ಪ್ರಸಾರ ಅತ್ಯಗತ್ಯ ಎಂದು ಹೇಳಿದೆ.