‘ನನ್ನನ್ನು ಗಲ್ಲಿಗೇರಿಸುವುದನ್ನು ಬೆಂಬಲಿಸಿ ಕೇಂದ್ರ ಸರ್ಕಾರದ ಸಚಿವರು ಹಾಗೂ ದೆಹಲಿ ಸರ್ಕಾರ ಸಾರ್ವಜನಿಕವಾಗಿ ನೀಡಿದ್ದ ಹೇಳಿಕೆಗಳಿಂದಾಗಿ, ನನ್ನ ಕ್ಷಮಾದಾನ ಅರ್ಜಿಯ ನಿರ್ಣಯ ಪೂರ್ವನಿರ್ಧರಿತವಾಗಿತ್ತು. ಕ್ಷಮಾದಾನ ಅರ್ಜಿ ಸಲ್ಲಿಕೆಯಾದ 48 ತಾಸುಗಳಲ್ಲಿಯೇ ತರಾತುರಿಯಲ್ಲಿ ಅರ್ಜಿಯನ್ನು ತಿರಸ್ಕರಿಸಿರುವುದು ವಂಚನೆ. ಇದು ಸಂವಿಧಾನದ ಉಲ್ಲಂಘನೆ’ ಎಂದು ಶರ್ಮಾ ಆರೋಪಿಸಿರುವುದಾಗಿ ಅರ್ಜಿಯಲ್ಲಿ ಹೇಳಲಾಗಿದೆ.