ಕಾರ್ಯಕ್ರಮದ ನಿಮಿತ್ತ ಶುಕ್ರವಾರ ದಿನವಿಡೀ ಬಯಲು ರಂಗಮಂದಿರದಲ್ಲಿ ಚುರುಕಿನಿಂದ ಸಿದ್ಧತೆಗಳು ನಡೆದವು. ಮಂಟಪಕ್ಕೆ ಸುಣ್ಣ, ಬಣ್ಣ ಬಳಿದು ಚೆಂದ ಮಾಡಲಾಗಿದೆ. ರಂಗಮಂದಿರದ ಆಸುಪಾಸಿನ ಗಿಡ, ಮರಗಳಿಗೆ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ಹಸಿರು ಹೊದಿಕೆ ಹಾಕಲಾಗಿದೆ. ಗಣ್ಯರು ಹಾಗೂ ಪದವಿ ಪ್ರಮಾಣ ಪತ್ರ ಪಡೆಯುವವರು ಕುಳಿತುಕೊಳ್ಳಲು ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಲಾಗಿದೆ.