ನಾಗರಕೊಡಿಗೆಯ ಎನ್.ಬಿ. ನಾಗೇಶ ಭಟ್ ಹಾಗೂ ಕಲ್ಕೆರೆ ನಟೇಶ, ಪ್ರಭಾಕರ ಹೆಗಡೆ ಅವರ ಭಾಗವತಿಕೆ, ಸಿಡಿಯಾ ನವನೀತ ಶಾನುಭೋಗ ಅವರ ಸಂಗೀತ ಸಂಯೋಜನೆ ಮತ್ತು ಹೊನ್ನಕುಡಿಗೆ ಗಣೇಶ್, ಕಾರ್ಗಲ್ ಮೇಘರಾಜ್, ಯಡ್ಲುಕೊಡಿಗೆ ರಾಘವೇಂದ್ರ ಭಟ್ ಚಂಡೆ– ಮದ್ದಲೆಯಲ್ಲಿ ಸಹಕರಿಸಿದರು. ಚಪ್ಪರದ ಮನೆ ರಾಮಚಂದ್ರ ಹೆಗಡೆ ಹಾಸ್ಯಗಾರರಾಗಿದ್ದರು. ಸ್ತ್ರೀ ಪಾತ್ರದಲ್ಲಿ ಕಿಗ್ಗ ಸುಂದರೇಶ, ಆಲ್ಮನೆ ಚಂದ್ರಶೇಖರ್, ವೀರಭದ್ರಗೌಡ, ಸಜ್ಜನ್ಕುಮಾರ್ ನಾಗರ ಕೂಡಿಗೆ ಇದ್ದರು. ಮುಮ್ಮೇಳದಲ್ಲಿ ಸೀತೂರು ಅಣ್ಣಾಜಿರಾವ್, ಮೇಳಿಗೆ ಸತ್ಯನಾರಾಯಣ ರಾವ್, ಕರೀಮನೆ ಸುಧಾಕರ ರಾವ್, ರವಿ ರಾಜ್ ಅಭಿನಯಿಸಿದ್ದರು.