ರ್ಯಾಲಿ ಸ್ಥಳಕ್ಕೆ ಮೋದಿ ಬರುವುದಕ್ಕೂ ಮೊದಲು ಈ ಯುವಕರು ಅಲ್ಲಿ ಸೇರಿದ್ದರು. ಎಂಜಿನಿಯರಿಂಗ್, ಬಿ.ಎ ಮತ್ತು ಕಾನೂನು ಪದವಿ ಪಡೆದಿದ್ದ ಯುವಕರು ಘಟಿಕೋತ್ಸವ ಧಿರಿಸಿನಲ್ಲಿದ್ದರು. ಎಲ್ಲರೂ ಒಂದೊಂದು ತಟ್ಟೆಯಲ್ಲಿ ಪಕೋಡಾ ಜೋಡಿಸಿಕೊಂಡು ಮಾರಾಟ ಮಾಡುತ್ತಿದ್ದರು. ಮುಂಜಾಗೃತಾ ಕ್ರಮವಾಗಿ ಅವರನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.