ಸಿಬಿಐನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯಕುಮಾರ್ ಕುಹರ್ ಈ ಆದೇಶ ಹೊರಡಿಸಿದ್ದಾರೆ. ಆ.26ರಂದು ಆದೇಶ ನೀಡಿ ಸಿಬಿಐ ಆ.30ರವರೆಗೆ ವಿಚಾರಣೆ ನಡೆಸಿ ಹಾಜರುಪಡಿಸುವಂತೆ ನ್ಯಾಯಾಲಯ ತಿಳಿಸಿತ್ತು.ಶುಕ್ರವಾರ ನ್ಯಾಯಾಲಯದ ಗಡುವು ಮುಗಿದ ಕಾರಣ ಹಾಜರುಪಡಿಸಲಾಗಿತ್ತು. ಚಿದಂಬರಂ ಅವರು ಎಲ್ಲಾ ಪ್ರಶ್ನೆಗಳಿಗೂ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಇನ್ನೂ ಹೆಚ್ಚಿನ ವಿವರ ಪಡೆಯಬೇಕಾಗಿರುವುದರಿಂದ ಆರೋಪಿಯನ್ನು ವಶಕ್ಕೆ ನೀಡುವಂತೆ ಸಿಬಿಐ ಕೋರಿತ್ತು. ಮನವಿಯನ್ನು ಪರಿಗಣಿಸಿದ ನ್ಯಾಯಾಲಯ ಸೆ.2ರವರೆಗೆ ವಶಕ್ಕೆ ನೀಡಿದೆ.