ಇಲ್ಲಿನ ಅಮಾಸೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಕೋಣ ದೈವಸ್ಥಾನದ ಬಳಿ ಊರಿನ ಯುವಕರು ವಂತಿಗೆ ಸಂಗ್ರಹಿಸಿ ಕಮಲಶಿಲೆ ಮೇಳದಿಂದ ಬುಧವಾರ ಯಕ್ಷಗಾನ ಪ್ರದರ್ಶನ ಹಮ್ಮಿಕೊಂಡಿದ್ದರು. ಪೆರ್ಡೂರು, ನೀಲಾವರ ಮೇಳದ ಅತಿಥಿ ಕಲಾವಿದರನ್ನು ಕರೆಸಲಾಗಿತ್ತು. ಆದರೆ, ಪ್ರದರ್ಶನ ಆಯೋಜಕರು ಧ್ವನಿವರ್ಧಕ ಬಳಕೆಗೆ ಪರವಾನಗಿ ಪಡೆಯದೇ ಇರುವುದು ಕುತ್ತು ತಂದಿದೆ. ಉಪವಿಭಾಗಾಧಿಕಾರಿ ಭೂಬಾಲನ್ ಪ್ರದರ್ಶನ ನಡೆಯುವ ಸ್ಥಳಕ್ಕೆ ಖುದ್ದು ಬಂದು ಪರವಾನಗಿ ಪಡೆಯಬೇಕು ಎಂದು ತಿಳಿಸಿದ್ದರು.