ಅದೇ ವೇಳೆ ಕೇರಳದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಪ್ರಧಾನಿ ಹೇಳಿದ್ದು ತಪ್ಪುಎಂದು ಅಧ್ಯಕ್ಷ ಭಾಷಣ ಮಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕೊಲ್ಲಂ ಬೈಪಾಸ್ ಮತ್ತು GAIL ಪೈಪ್ಲೈನ್ ಇವೆರಡು ಕೇರಳದ ಅಭಿವೃದ್ಧಿ ಯೋಜನೆಗೆ ಸಾಕ್ಷಿ ಎಂದಿದ್ದಾರೆ ಪಿಣರಾಯಿ.ಅಧ್ಯಕ್ಷ ಭಾಷಣದ ನಡುವೆ ಕೆಲವರು ಶರಣಂ ಕೂಗಿ ಪ್ರತಿಭಟನೆ ವ್ಯಕ್ತ ಪಡಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿದ ಪಿಣರಾಯಿ, ಈ ವೇದಿಕೆಯಲ್ಲಿಏನು ಬೇಕಾದರು ಹೇಳಬಹುದು, ಮಾಡಬಹುದು ಎಂದು ಅಂದುಕೊಳ್ಳಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.