ಕೋಲ್ಕತ್ತ: ಬುಲ್ಬುಲ್ ಚಂಡಮಾರುತ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿ ಹಾದುಹೋಗಿದ್ದು, ಉಭಯ ರಾಜ್ಯಗಳಲ್ಲಿಭಾರಿ ಮಳೆಯಾಗಿದೆ. ಹಲವೆಡೆ ಭೂಕುಸಿತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಕೋಲ್ಕತ್ತಕ್ರಿಕೆಟ್ ಮತ್ತು ಫುಟ್ಬಾಲ್ಕ್ಲಬ್ವೊಂದರಮುಂಭಾಗದಲ್ಲಿ ವ್ಯಕ್ತಿಯೊಬ್ಬರ ಮೇಲೆ ಮರ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತನನ್ನು 28 ವರ್ಷದ ಎಸ್.ಕೆ. ಸೋಹೆಲ್ ಎಂದು ಗುರುತಿಸಲಾಗಿದೆ. ಒಡಿಶಾದಲ್ಲಿ ಭಾರಿ ಮಳೆಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
#WATCH West Bengal: Early morning visuals from South 24 Parganas. #CycloneBulbul pic.twitter.com/ZVW7SSzJbT
— ANI (@ANI) November 10, 2019
ಪರಿಸ್ಥಿತಿ ನಿಭಾಯಿಸಲು ಪಶ್ಚಿಮ ಬಂಗಾಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಈಗಾಗಲೇ ತಲುಪಿದ್ದು, ದಕ್ಷಿಣ 24 ಪರಗಣದಲ್ಲಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಮಾಡಲಾಗುತ್ತಿದೆ.
ಕೋಲ್ಕತ್ತಪೋರ್ಟ್ ಟ್ರಸ್ಟ್ನ ಸಾಗರ್ ಪೈಲಟ್ ಸ್ಟೇಷನ್ ಬಳಿಯಲ್ಲಿ ಚಂಡಮಾರುತ ಪೀಡಿತ 200 ಗ್ರಾಮಸ್ಥರಿಗೆಆಶ್ರಯ ತಾಣಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಕೋಲ್ಕತ್ತದ ಬಿಚಲಿ ಘಾಟ್ನಲ್ಲಿ ದೋಣಿ ಸೇವೆ ಸ್ಥಗಿತಗೊಳಿಸಲಾಗಿದೆ.
ಮಮತಾ ಜತೆ ಮೋದಿ ಮಾತುಕತೆ:‘ಪೂರ್ವ ಭಾರತದ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ. ಬುಲ್ಬುಲ್ಚಂಡಮಾರುತದ ಪರಿಣಾಮದ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೂ ಮಾತುಕತೆ ನಡೆಸಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು’ ಎಂದುಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
Reviewed the situation in the wake of cyclone conditions and heavy rain in parts of Eastern India.
— Narendra Modi (@narendramodi) November 10, 2019
Spoke to WB CM @MamataOfficial regarding the situation arising due to Cyclone Bulbul. Assured all possible assistance from the Centre. I pray for everyone’s safety and well-being.
ಭಾನುವಾರ ಮುಂಜಾನೆ ಪಶ್ಚಿಮ ಬಂಗಾಳದ ಸಾಗರ್ ದ್ವೀಪಗಳು ಮತ್ತು ಬಾಂಗ್ಲಾದೇಶದ ಖೇಪುಪರ ನಡುವೆ ಗಂಟೆಗೆ 110ರಿಂದ 120 ಕಿ.ಮೀ ವೇಗದಲ್ಲಿ ಗಾಳಿಬೀಸಿದೆ. ಹಲವೆಡೆ ಭೂಕುಸಿತ ಉಂಟಾಗಿದೆ. ಚಂಡಮಾರುತವು ಬಾಂಗ್ಲಾದೇಶ ಕರಾವಳಿ ಮತ್ತು ಪಕ್ಕದ ದಕ್ಷಿಣ ಮತ್ತು ಉತ್ತರ 24 ಪರಗಣ ಜಿಲ್ಲೆಗಳ ಕಡೆಗೆ ಚಲಿಸುವಾಗ ಕ್ರಮೇಣ ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಶನಿವಾರ ಪೂರ್ತಿ ಭಾರಿ ಮಳೆಯಾಗಿದ್ದು, ಗಿಡಮರಗಳು ಧರೆಗುರುಳಿವೆ. ಕರಾವಳಿ ಮತ್ತು ಪಕ್ಕದ ಪಶ್ಚಿಮ ಮತ್ತು ಪೂರ್ವ ಮಿಡ್ನಾಪುರ, ದಕ್ಷಿಣ ಮತ್ತು ಉತ್ತರ ಪರಗಣ ಜಿಲ್ಲೆಗಳಲ್ಲಿ ಗಂಟೆಗೆ 135 ಕಿ.ಮೀ ವೇಗದಲ್ಲಿ ಗಾಳಿ ಬೀಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.