ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರ ಕಲಹ: ರಾಷ್ಟ್ರಪತಿಗೆ ಪತ್ರ ಬರೆದ ಬಾಲಕ

ಪ್ರಧಾನಿ ಕಚೇರಿಗೆ ಪತ್ರ ರವಾನೆ
Last Updated 17 ಜುಲೈ 2019, 17:53 IST
ಅಕ್ಷರ ಗಾತ್ರ

ಭಾಗಲ್ಪುರ (ಬಿಹಾರ): ಪೋಷಕರ ನಡುವಿನ ಜಗಳದಿಂದ ಬೇಸತ್ತ 15 ವರ್ಷದ ಬಾಲಕ ತನ್ನ ಜೀವನ ಕೊನೆಗಾಣಿಸಿಕೊಳ್ಳಲು ಅನುಮತಿ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾನೆ.

ಈ ಪತ್ರ ರಾಷ್ಟ್ರಪತಿ ಕಚೇರಿಯಿಂದ ಪ್ರಧಾನಿ ಕಚೇರಿಗೆ ರವಾನೆಯಾಗಿದೆ. ಈ ಕುರಿತು ತ್ವರಿತ ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ಕಚೇರಿ ಭಾಗಲ್ಪುರ ಜಿಲ್ಲಾಡಳಿತಕ್ಕೆ ಸೂಚಿಸಿದೆ.

ಬಾಲಕನ ತಂದೆ ಜಾರ್ಖಂಡ್‌ನಲ್ಲಿ ಸರ್ಕಾರಿ ಅಧಿಕಾರಿಯಾಗಿದ್ದು, ತಾಯಿ ಪಟ್ನಾದಲ್ಲಿ ಬ್ಯಾಂಕ್‌ ಸಿಬ್ಬಂದಿಯಾಗಿದ್ದಾರೆ. ಬಾಲಕ ತಂದೆ ಜತೆ ಜಾರ್ಖಂಡ್‌ನಲ್ಲಿ ವಾಸಿಸುತ್ತಿದ್ದಾನೆ. ‘ತಂದೆ ಕ್ಯಾನ್ಸರ್‌ನಿಂದ ನರಳುತ್ತಿದ್ದಾರೆ. ಅವರಿಗೆ ನನ್ನತಾಯಿಯೇ ಸಮಾಜ ವಿರೋಧಿ ಶಕ್ತಿಗಳಿಂದ ಬೆದರಿಕೆ ಒಡ್ಡುತ್ತಿದ್ದಾರೆ’ ಎಂದು ಬಾಲಕ ಪತ್ರದಲ್ಲಿ ದೂರಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT