ಮಂಗಳವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್, ದೇಶದ ಸಂಸದರಿಗೆ ಕಾಶ್ಮೀರ ಭೇಟಿಯನ್ನು ನಿರಾಕರಿಸಿ, ಐರೋಪ್ಯ ಒಕ್ಕೂಟದ ಸಂಸದರಿಗೆ ಅನುವು ಮಾಡಿಕೊಡುವ ಸರ್ಕಾರದ ನಿಲುವನ್ನು ಖಂಡಿಸಿತ್ತು. ಇದು ರಾಷ್ಟ್ರೀಯ ಮುಜುಗರ ಎಂದೂ ಕರೆದಿತ್ತು. ಭಾರತೀಯ ಸಂಸದರ ಬದಲಾಗಿ ಐರೋಪ್ಯ ಒಕ್ಕೂಟದ ಸಂಸದರಿಗೆ ಅವಕಾಶ ಮಾಡಿಕೊಟ್ಟ ಬಿಜೆಪಿಯ ರಾಷ್ಟ್ರೀಯವಾದ ಪ್ರಬಲವಾದುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಲೇವಡಿ ಮಾಡಿದ್ದರು.