ಚೆನ್ನೈ: ಎಐಎಡಿಎಂಕೆ ವಿರುದ್ಧ ಬಂಡಾಯ ಎದ್ದಿರುವ ಟಿ.ಟಿ.ವಿ. ದಿನಕರನ್ 18 ಅನರ್ಹ ಶಾಸಕರು ಮತ್ತು ಅವರ ಬೆಂಬಲಿತ ಶಾಸಕರನ್ನು ಪ್ರವಾಸಿ ನಗರ ಕೋರ್ಟಳಂಗೆ ಕರೆದೊಯ್ಯುವ ಯೋಚನೆಯಲ್ಲಿದ್ದು, ತಮಿಳುನಾಡಿನಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ ಪ್ರಾರಂಭವಾಗುವ ಸಾಧ್ಯತೆ ಇದೆ.
18 ಶಾಸಕರನ್ನು ಅನರ್ಹಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಈ ವಾರ ತೀರ್ಪು ನೀಡಲಿದೆ. ಹೀಗಾಗಿ, ಮಂಗಳವಾರ ಅಥವಾ ಬುಧವಾರ ಈ ಶಾಸಕರನ್ನು ಕೋರ್ಟಳಂಗೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.