ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ವಿವಾದವನ್ನು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ಶಿಫಾರಸು ಮಾಡಬೇಕು ಎಂಬ ಮನವಿಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 27ರಂದು ತಿರಸ್ಕರಿಸಿತ್ತು. ಇದರಿಂದ ವಿವಾದಿತ ಭೂಪ್ರದೇಶಕ್ಕೆ ಸಂಬಂಧಿಸಿದ ವಿಚಾರಣೆ ಹಾದಿ ಸುಗಮವಾಗಿತ್ತು. ಈ ಹಿಂದೆ 1994ರಲ್ಲಿ ಇಸ್ಮಾಯಿಲ್ ಫಾರೂಕಿ ಪ್ರಕರಣದಲ್ಲಿ ನೀಡಿದ್ದ ‘ಮಸೀದಿಯು ಇಸ್ಲಾಂ ಧರ್ಮದ ಅಂತರ್ಗತ ಅಂಶವಲ್ಲ’ ಎಂಬ ತೀರ್ಪನ್ನು ಮರು ಪರಿಶೀಲಿಸುವ ಬೇಡಿಕೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ (ಈಗ ನಿವೃತ್ತರಾಗಿದ್ದಾರೆ) ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ಸೆಪ್ಟೆಂಬರ್ 27ರಂದು 2:1 ಬಹುಮತದಲ್ಲಿ ತಳ್ಳಿ ಹಾಕಿತ್ತು.