<p><strong>ನವದೆಹಲಿ:</strong> ‘ಮಧ್ಯಪ್ರದೇಶ ವಿಧಾನಸಭೆ ವಿಶೇಷ ಅಧಿವೇಶನವನ್ನು ಶುಕ್ರವಾರವೇ ಕರೆದು ವಿಶ್ವಾಸಮತ ಸಾಬೀತು ಪ್ರಕ್ರಿಯೆಯನ್ನು ಸಂಜೆ 5ಗಂಟೆ ಒಳಗೆ ಪೂರ್ಣಗೊಳಿಸಬೇಕು’ ಎಂದು ಸುಪ್ರೀ ಕೋರ್ಟ್ ಅಲ್ಲಿನ ಸ್ಪೀಕರ್ಗೆ ಆದೇಶಿಸಿತು.</p>.<p>ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಸ್ಪೀಕರ್ ಎನ್.ಪಿ.ಪ್ರಜಾಪತಿ ಅವರಿಗೆ ಈ ನಿರ್ದೇಶನ ನೀಡಿದ್ದು, ವಿಶ್ವಾಸಮತ ಕೋರುವ ಇಡೀ ಕಲಾಪದ ವಿಡಿಯೊ ಚಿತ್ರೀಕರಣ ಮಾಡಿಸಬೇಕು ಎಂದು ತಿಳಿಸಿತು.</p>.<p>ಅಲ್ಲದೆ, ಮುಖ್ಯಮಂತ್ರಿವಿಶ್ವಾಸಮತ ಕೋರುವ ಸಂದರ್ಭದಲ್ಲಿ 16 ಬಂಡಾಯ ಶಾಸಕರು ಸದನಕ್ಕೆ ಬರಲು ಬಯಸಿದರೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮಧ್ಯಪ್ರದೇಶ, ಕರ್ನಾಟಕ ರಾಜ್ಯಗಳ ಪೊಲೀಸ್ ವರಿಷ್ಠರಿಗೂ ನ್ಯಾಯಪೀಠ ಆದೇಶಿಸಿತು.</p>.<p>ವಿಶೇಷ ಅಧಿವೇಶನದ ಕಾರ್ಯಸೂಚಿ ವಿಶ್ವಾಸಮತ ಕೋರುವುದಷ್ಟೇ ಆಗಿರಬೇಕು. ಕಲಾಪಕ್ಕೆ ಯಾರೂ ಅಡ್ಡಿಪಡಿಸಬಾರದು. ಕಾನೂನು ಉಲ್ಲಂಘನೆ ಆಗದಂತೆ ಎಚ್ಚರವಹಿಸಬೇಕು ಎಂದು ವಿಧಾನಸಭೆ ಕಾರ್ಯದರ್ಶಿ ಅವರಿಗೆ ಸೂಚಿಸಿತು.</p>.<p>ವಿಡಿಯೊ ಸಂವಾದಕ್ಕೆ ಸೂಚನೆ: ಇದಕ್ಕೂ ಮುನ್ನ ಬೆಳಿಗ್ಗೆ ವಿಚಾರಣೆ ವೇಳೆ ನ್ಯಾಯಪೀಠವು ‘ಬಂಡಾಯ ಶಾಸಕರ ಜೊತೆ ವಿಡಿಯೊ ಸಂವಾದ ನಡೆಸಬೇಕು’ ಎಂದು ಸ್ಪೀಕರ್ಗೆ ಸಲಹೆ ಮಾಡಿತು..ಈ ಸಲಹೆಗೆ ಸ್ಪೀಕರ್ ಅಸಮ್ಮತಿ ಸೂಚಿಸಿದ್ದರು.</p>.<p>‘ವಿಡಿಯೊ ಚರ್ಚೆಗೆ ನೆರವಾಗಲು ಪೀಠವು ಬೆಂಗಳೂರು ಅಥವಾ ಇತರೆ ಸ್ಥಳಕ್ಕೆವೀಕ್ಷಕರನ್ನು ನಿಯೋಜಿಸಲಾಗುವುದು. ಈ ಮೂಲಕ ಶಾಸಕರ ಜೊತೆ ಚರ್ಚಿಸಿಸ್ಪೀಕರ್ ತೀರ್ಮಾನಿಸಬಹುದು’ ಎಂದು ಹೇಳಿತು.</p>.<p>ಅಲ್ಲದೆ, ‘ಬಂಡಾಯ ಶಾಸಕರು ನೀಡಿರುವ ರಾಜೀನಾಮೆ ಪತ್ರ ಕುರಿತಂತೆ ಯಾವುದಾದರೂ ವಿಚಾರಣೆ ನಡೆಸಲಾಗಿದೆಯೇ ಹಾಗೂ ಯಾವ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ನ್ಯಾಯಪೀಠವು ಸ್ಪೀಕರ್ಗೆ ಪ್ರಶ್ನಿಸಿತು.</p>.<p>ಸ್ಪೀಕರ್ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಎ.ಎಂ.ಸಿಂಘ್ವಿ ಅವರು, ‘ಕೋರ್ಟ್ ಹೀಗೆ ಕಾಲಮಿತಿಯ ನಿರ್ದೇಶನವನ್ನು ಸ್ಪೀಕರ್ಗೆ ನೀಡಲು ಆರಂಭಿಸಿದರೆ, ಸಾಂವಿಧಾನಿಕವಾಗಿ ಸಮಸ್ಯೆಯಾಗಲಿದೆ’ ಎಂದು ಪ್ರತಿಪಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಮಧ್ಯಪ್ರದೇಶ ವಿಧಾನಸಭೆ ವಿಶೇಷ ಅಧಿವೇಶನವನ್ನು ಶುಕ್ರವಾರವೇ ಕರೆದು ವಿಶ್ವಾಸಮತ ಸಾಬೀತು ಪ್ರಕ್ರಿಯೆಯನ್ನು ಸಂಜೆ 5ಗಂಟೆ ಒಳಗೆ ಪೂರ್ಣಗೊಳಿಸಬೇಕು’ ಎಂದು ಸುಪ್ರೀ ಕೋರ್ಟ್ ಅಲ್ಲಿನ ಸ್ಪೀಕರ್ಗೆ ಆದೇಶಿಸಿತು.</p>.<p>ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಸ್ಪೀಕರ್ ಎನ್.ಪಿ.ಪ್ರಜಾಪತಿ ಅವರಿಗೆ ಈ ನಿರ್ದೇಶನ ನೀಡಿದ್ದು, ವಿಶ್ವಾಸಮತ ಕೋರುವ ಇಡೀ ಕಲಾಪದ ವಿಡಿಯೊ ಚಿತ್ರೀಕರಣ ಮಾಡಿಸಬೇಕು ಎಂದು ತಿಳಿಸಿತು.</p>.<p>ಅಲ್ಲದೆ, ಮುಖ್ಯಮಂತ್ರಿವಿಶ್ವಾಸಮತ ಕೋರುವ ಸಂದರ್ಭದಲ್ಲಿ 16 ಬಂಡಾಯ ಶಾಸಕರು ಸದನಕ್ಕೆ ಬರಲು ಬಯಸಿದರೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮಧ್ಯಪ್ರದೇಶ, ಕರ್ನಾಟಕ ರಾಜ್ಯಗಳ ಪೊಲೀಸ್ ವರಿಷ್ಠರಿಗೂ ನ್ಯಾಯಪೀಠ ಆದೇಶಿಸಿತು.</p>.<p>ವಿಶೇಷ ಅಧಿವೇಶನದ ಕಾರ್ಯಸೂಚಿ ವಿಶ್ವಾಸಮತ ಕೋರುವುದಷ್ಟೇ ಆಗಿರಬೇಕು. ಕಲಾಪಕ್ಕೆ ಯಾರೂ ಅಡ್ಡಿಪಡಿಸಬಾರದು. ಕಾನೂನು ಉಲ್ಲಂಘನೆ ಆಗದಂತೆ ಎಚ್ಚರವಹಿಸಬೇಕು ಎಂದು ವಿಧಾನಸಭೆ ಕಾರ್ಯದರ್ಶಿ ಅವರಿಗೆ ಸೂಚಿಸಿತು.</p>.<p>ವಿಡಿಯೊ ಸಂವಾದಕ್ಕೆ ಸೂಚನೆ: ಇದಕ್ಕೂ ಮುನ್ನ ಬೆಳಿಗ್ಗೆ ವಿಚಾರಣೆ ವೇಳೆ ನ್ಯಾಯಪೀಠವು ‘ಬಂಡಾಯ ಶಾಸಕರ ಜೊತೆ ವಿಡಿಯೊ ಸಂವಾದ ನಡೆಸಬೇಕು’ ಎಂದು ಸ್ಪೀಕರ್ಗೆ ಸಲಹೆ ಮಾಡಿತು..ಈ ಸಲಹೆಗೆ ಸ್ಪೀಕರ್ ಅಸಮ್ಮತಿ ಸೂಚಿಸಿದ್ದರು.</p>.<p>‘ವಿಡಿಯೊ ಚರ್ಚೆಗೆ ನೆರವಾಗಲು ಪೀಠವು ಬೆಂಗಳೂರು ಅಥವಾ ಇತರೆ ಸ್ಥಳಕ್ಕೆವೀಕ್ಷಕರನ್ನು ನಿಯೋಜಿಸಲಾಗುವುದು. ಈ ಮೂಲಕ ಶಾಸಕರ ಜೊತೆ ಚರ್ಚಿಸಿಸ್ಪೀಕರ್ ತೀರ್ಮಾನಿಸಬಹುದು’ ಎಂದು ಹೇಳಿತು.</p>.<p>ಅಲ್ಲದೆ, ‘ಬಂಡಾಯ ಶಾಸಕರು ನೀಡಿರುವ ರಾಜೀನಾಮೆ ಪತ್ರ ಕುರಿತಂತೆ ಯಾವುದಾದರೂ ವಿಚಾರಣೆ ನಡೆಸಲಾಗಿದೆಯೇ ಹಾಗೂ ಯಾವ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ನ್ಯಾಯಪೀಠವು ಸ್ಪೀಕರ್ಗೆ ಪ್ರಶ್ನಿಸಿತು.</p>.<p>ಸ್ಪೀಕರ್ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಎ.ಎಂ.ಸಿಂಘ್ವಿ ಅವರು, ‘ಕೋರ್ಟ್ ಹೀಗೆ ಕಾಲಮಿತಿಯ ನಿರ್ದೇಶನವನ್ನು ಸ್ಪೀಕರ್ಗೆ ನೀಡಲು ಆರಂಭಿಸಿದರೆ, ಸಾಂವಿಧಾನಿಕವಾಗಿ ಸಮಸ್ಯೆಯಾಗಲಿದೆ’ ಎಂದು ಪ್ರತಿಪಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>