ಹೈಕೋರ್ಟ್ ಆದೇಶಕ್ಕೂ ತಡೆ ನೀಡಬೇಕು ಎಂದು ಮಂಜುನಾಥ ಪರ ವಕೀಲರಾದ ಶೇಖರ್ ನಾಫಡೆ ಹಾಗೂ ಬಸವಪ್ರಭು ಪಾಟೀಲ ಅವರು ಮನವಿ ಸಲ್ಲಿಸಿದರು. ಆದರೆ, ವಿಚಾರಣೆ ಬಾಕಿ ಇರುವುದರಿಂದ ಸಂಬಳ, ಭತ್ಯೆ ಮತ್ತಿತರ ರೂಪದಲ್ಲಿ ನೀಡಲಾದ ₹ 90 ಲಕ್ಷ ಮರು ಪಾವತಿಗೆ ಕೋರಿರುವ ಸರ್ಕಾರದ ಆದೇಶಕ್ಕೆ ಮಾತ್ರ ತಾತ್ಕಾಲಿಕವಾಗಿ ತಡೆ ನೀಡಲಾಗುವುದು ಎಂದು ಪೀಠ ಹೇಳಿತು.