ಎನ್ಎಂಸಿಜಿಯ ನಿರ್ದೇಶಕ ರಾಜೀವ್ ರಂಜನ್ ಅವರನ್ನು ಏ.25ರಂದು ಭೇಟಿ ಮಾಡಿದ ವೇಳೆ ಅಣೆಕಟ್ಟು ನಿರ್ಮಾಣ, ನದಿಗಳ ಉಳಿವು, ಗಣಿಗಾರಿಕೆ ಹೀಗೆ ಇನ್ನಿತರೆ ವಿಚಾರಗಳ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಲಿಖಿತ ಪತ್ರ ನೀಡಿದ್ದೆ ಎಂದು ಆತ್ಮಬೋಧಾನಂದ ಹೇಳಿದ್ದಾರೆ. ಸರ್ಕಾರ ಹಾಗೂ ಎನ್ಎಂಸಿಜಿ ಸಮಿತಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದ ಬಳಿಕ ಈ ನಿರ್ಧಾರ ಕೈಗೊಂಡಿದ್ದಾರೆ.