ಭೇಟಿ ನಂತರ ಮಾತನಾಡಿದ ಸಂಘಟನೆಯ ಅಧ್ಯಕ್ಷ ಕೆ. ಎಂ ಬಖಾವಿ, ’ ಸಂಘದ ನಮ್ಮ ನಿಯೋಗ ಇಂದು ರಜನಿಕಾಂತ್ ಅವರನ್ನು ಭೇಟಿ ಮಾಡಿತು. ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರಕ್ರಿಯೆ ಬಗ್ಗೆ ಸಂಘಟನೆ ರಜನಿ ಅವರೊಂದಿಗೆ ಚರ್ಚೆ ನಡೆಸಿದೆ. ಎನ್ಪಿಆರ್ನಿಂದಾಗಿ ಮುಸ್ಲಿಮರು ಎದುರಿಸುವ ತೊಂದರೆಗಳನ್ನು ನಾವು ವಿವರಿಸಿದ್ದೇವೆ. ಅವರಿಗೆ ನಮ್ಮ ಮನವಿ ಅರ್ಥವಾಗಿದೆ. ಮುಸ್ಲಿಮರಲ್ಲಿರುವ ಆತಂಕ ನಿವಾರಣೆಯಾಗಲು ತಮ್ಮ ಕೈಲಾಗುವ ಸಹಾಯ ಮಾಡುವುದಾಗಿ ಅವರು ತಿಳಿಸಿದ್ದಾರೆ,’ ಎಂದು ತಿಳಿಸಿದರು.