<p><strong>ತಿರುಪತಿ:</strong> ಆಂಧ್ರ ಪ್ರದೇಶದ ತಿರುಪತಿಯಲ್ಲಿರುವ ಗೋವಿಂದರಾಜಸ್ವಾಮಿ ದೇವಾಲಯದಿಂದ ರತ್ನಕಚಿತ ಬಂಗಾರದ ಮುಕುಟಗಳು ಶನಿವಾರ ಕಳುವಾಗಿವೆ.</p>.<p>ಸಂಜೆ ಪ್ರಸಾದ ವಿತರಿಸುವ ಸಮಯದಲ್ಲಿ ದೇವರಿಗೆ ಮುಡುಪಾಗಿರುವ ಮೂರು ಬಂಗಾರದ ಕಿರೀಟಗಳು ಕಳುವಾಗಿವೆ ಎಂದು ದೇವಾಲಯದ ಸೂಪರಿಂಡೆಂಟ್ ಶ್ರೀ ಗ್ಯಾನ ಪ್ರಕಾಶ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.</p>.<p>ಮಲಯಪ್ಪ, ಶ್ರೀದೇವಿ ಹಾಗೂ ಭೂದೇವಿ ದೇವರ ವಿಗ್ರಹಗಳ ಕಿರೀಟಗಳು ಕಾಣೆಯಾಗಿವೆ. ಈ ಮೂರೂ ಕಿರೀಟಗಳ ತೂಕ 1,351 ಗ್ರಾಂ.ರತ್ನಗಳಿಂದ ಅಲಂಕೃತವಾಗಿರುವಮಲಯಪ್ಪ ದೇವರ ಚಿನ್ನದ ಕಿರೀಟ 528 ಗ್ರಾಂ, ಶ್ರೀದೇವಿ ಕಿರೀಟ 408 ಗ್ರಾಂ ಹಾಗೂ ಭೂದೇವಿಯ ಕಿರೀಟ 415 ಗ್ರಾಂ ತೂಕವಿದೆ.</p>.<p>’ದೇವಾಲಯ ಹಾಗೂ ಸುತ್ತಲಿನ ಎಲ್ಲ ಸಿಸಿಟಿವಿ ದೃಶ್ಯಗಳನ್ನೂ ಪರಿಶೀಲಿಸಲಾಗುತ್ತಿದ್ದು, ಈ ಸ್ಥಳದಲ್ಲಿದ್ದ ಎಲ್ಲರನ್ನೂ ಸಂಶಯದ ಮೇರೆಗೆ ವಿಚಾರಣೆಗೆ ಒಳಪಡಿಸಲಾಗುತ್ತದೆ’ ಎಂದು ತನಿಖಾಧಿಕಾರಿ ಪ್ರತಿಕ್ರಿಯಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.</p>.<p>ಶನಿವಾರ ಸಂಜೆ ಸುಮಾರು 5:45ರಲ್ಲಿ ಕಿರೀಟಗಳು ನಾಪತ್ತೆಯಾಗಿರುವುದನ್ನು ಅರ್ಚಕರು ಗಮನಿಸಿದ್ದಾರೆ. ಪೂಜಾಕಾರ್ಯಗಳಿಗಾಗಿ ಆಚರಣೆಯಂತೆ ಸಂಜೆ 5ಕ್ಕೆ ಭಕ್ತಾದಿಗಳ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಹಾಗೂ 45 ನಿಮಿಷಗಳ ನಂತರ ದೇವಾಲಯವನ್ನು ತೆರೆಯಲಾಗುತ್ತದೆ. ಈ 45 ನಿಮಿಷಗಳಲ್ಲಿ ಕಿರೀಟಗಳು ಕಳುವಾಗಿರುವುದನ್ನು ಗಮನಿಸಲಾಗಿದೆ.</p>.<p>ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಪಕ್ಷದ ಕಾರ್ಯಕರ್ತರು ಕಳ್ಳತನವನ್ನು ವಿರೋಧಿಸಿ ದೇವಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.</p>.<p>ದೇವಾಲಯಗಳ ನಗರಿಯ ಕೇಂದ್ರ ಭಾಗದಲ್ಲಿ ಶ್ರೀ ಗೋವಿಂದರಾಜಸ್ವಾಮಿ ದೇವಾಲಯವಿದೆ. ಇದು ಅತ್ಯಂತ ಪ್ರಾಚೀನ ದೇವಾಲಯಗಳಲ್ಲೊಂದಾಗಿದ್ದು, 12ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಐತಿಹ್ಯವಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುಪತಿ:</strong> ಆಂಧ್ರ ಪ್ರದೇಶದ ತಿರುಪತಿಯಲ್ಲಿರುವ ಗೋವಿಂದರಾಜಸ್ವಾಮಿ ದೇವಾಲಯದಿಂದ ರತ್ನಕಚಿತ ಬಂಗಾರದ ಮುಕುಟಗಳು ಶನಿವಾರ ಕಳುವಾಗಿವೆ.</p>.<p>ಸಂಜೆ ಪ್ರಸಾದ ವಿತರಿಸುವ ಸಮಯದಲ್ಲಿ ದೇವರಿಗೆ ಮುಡುಪಾಗಿರುವ ಮೂರು ಬಂಗಾರದ ಕಿರೀಟಗಳು ಕಳುವಾಗಿವೆ ಎಂದು ದೇವಾಲಯದ ಸೂಪರಿಂಡೆಂಟ್ ಶ್ರೀ ಗ್ಯಾನ ಪ್ರಕಾಶ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.</p>.<p>ಮಲಯಪ್ಪ, ಶ್ರೀದೇವಿ ಹಾಗೂ ಭೂದೇವಿ ದೇವರ ವಿಗ್ರಹಗಳ ಕಿರೀಟಗಳು ಕಾಣೆಯಾಗಿವೆ. ಈ ಮೂರೂ ಕಿರೀಟಗಳ ತೂಕ 1,351 ಗ್ರಾಂ.ರತ್ನಗಳಿಂದ ಅಲಂಕೃತವಾಗಿರುವಮಲಯಪ್ಪ ದೇವರ ಚಿನ್ನದ ಕಿರೀಟ 528 ಗ್ರಾಂ, ಶ್ರೀದೇವಿ ಕಿರೀಟ 408 ಗ್ರಾಂ ಹಾಗೂ ಭೂದೇವಿಯ ಕಿರೀಟ 415 ಗ್ರಾಂ ತೂಕವಿದೆ.</p>.<p>’ದೇವಾಲಯ ಹಾಗೂ ಸುತ್ತಲಿನ ಎಲ್ಲ ಸಿಸಿಟಿವಿ ದೃಶ್ಯಗಳನ್ನೂ ಪರಿಶೀಲಿಸಲಾಗುತ್ತಿದ್ದು, ಈ ಸ್ಥಳದಲ್ಲಿದ್ದ ಎಲ್ಲರನ್ನೂ ಸಂಶಯದ ಮೇರೆಗೆ ವಿಚಾರಣೆಗೆ ಒಳಪಡಿಸಲಾಗುತ್ತದೆ’ ಎಂದು ತನಿಖಾಧಿಕಾರಿ ಪ್ರತಿಕ್ರಿಯಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.</p>.<p>ಶನಿವಾರ ಸಂಜೆ ಸುಮಾರು 5:45ರಲ್ಲಿ ಕಿರೀಟಗಳು ನಾಪತ್ತೆಯಾಗಿರುವುದನ್ನು ಅರ್ಚಕರು ಗಮನಿಸಿದ್ದಾರೆ. ಪೂಜಾಕಾರ್ಯಗಳಿಗಾಗಿ ಆಚರಣೆಯಂತೆ ಸಂಜೆ 5ಕ್ಕೆ ಭಕ್ತಾದಿಗಳ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಹಾಗೂ 45 ನಿಮಿಷಗಳ ನಂತರ ದೇವಾಲಯವನ್ನು ತೆರೆಯಲಾಗುತ್ತದೆ. ಈ 45 ನಿಮಿಷಗಳಲ್ಲಿ ಕಿರೀಟಗಳು ಕಳುವಾಗಿರುವುದನ್ನು ಗಮನಿಸಲಾಗಿದೆ.</p>.<p>ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಪಕ್ಷದ ಕಾರ್ಯಕರ್ತರು ಕಳ್ಳತನವನ್ನು ವಿರೋಧಿಸಿ ದೇವಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.</p>.<p>ದೇವಾಲಯಗಳ ನಗರಿಯ ಕೇಂದ್ರ ಭಾಗದಲ್ಲಿ ಶ್ರೀ ಗೋವಿಂದರಾಜಸ್ವಾಮಿ ದೇವಾಲಯವಿದೆ. ಇದು ಅತ್ಯಂತ ಪ್ರಾಚೀನ ದೇವಾಲಯಗಳಲ್ಲೊಂದಾಗಿದ್ದು, 12ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಐತಿಹ್ಯವಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>