ಮನೆಗೆ ಪ್ರವೇಶಿಸದಂತೆ ತಡೆಯುವಲ್ಲಿ ಪತಿ ಕೃಷ್ಣನುಣ್ಣಿ ಅವರೇ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ, ನ್ಯಾಯಾಲಯದ ಆದೇಶದೊಂದಿಗೆ ಮನೆಯೊಳಕ್ಕೆ ಪ್ರವೇಶಿಸಲಿದ್ದೇನೆ. ಅಲ್ಲಿಯವರೆಗೂ ‘ಒನ್ ಸ್ಟಾಪ್ ಸೆಂಟರ್’ನಲ್ಲಿ ಉಳಿಯಲಿದ್ದೇನೆ ಎಂದು ಕೇರಳ ಸರ್ಕಾರದ ನಾಗರಿಕ ಸೇವಾ ಅಧಿಕಾರಿಯೂ ಆಗಿರುವ ಕನಕದುರ್ಗಾ ಹೇಳಿದ್ದಾರೆ. ದೈಹಿಕ, ಲೈಂಗಿಕ, ಮಾನಸಿಕ ಮತ್ತು ಆರ್ಥಿಕ ದೌರ್ಜನ್ಯಕ್ಕೊಳಗಾದವರಿಗೆ ನೆಲೆಯೊದಗಿಸಲು ಕೇರಳ ಸರ್ಕಾರ ಆರಂಭಿಸಿರುವ ಕೇಂದ್ರವಾಗಿದೆ‘ಒನ್ ಸ್ಟಾಪ್ ಸೆಂಟರ್’. ಸದ್ಯ ಕನಕದುರ್ಗಾ ಅವರು ಮಲಪ್ಪುರಂನ ಪೆರಿಂತಲಮನ್ನಾದಲ್ಲಿರುವ ಕೇಂದ್ರದಲ್ಲಿ ವಾಸ್ತವ್ಯವಿದ್ದಾರೆ.