ಕಾಂಚೀಪುರಂ (ತಮಿಳುನಾಡು): ‘ಮೋದಿಗೆ ಗುಂಡಿಕ್ಕಿ’ ಎಂದಿದ್ದ ಕಾಂಗ್ರೆಸ್ನ ಬೇಳೂರು ಗೋಪಾಲಕೃಷ್ಣ ಅವರ ಮಾತಿಗೆ ಮೋದಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ವಿರುದ್ಧದ ಯಾವುದೇ ಬೆದರಿಕೆ ಹಾಗೂ ನಿಂದನೆಗಳಿಗೆ ಕಿವಿಗೊಡುವುದಿಲ್ಲ ಎಂದಿರುವ ಅವರು, ‘ನನ್ನ ದೇಹದ ಪ್ರತಿ ಹನಿಯೂ ಭಾರತಕ್ಕಾಗಿ ಮೀಸಲು’ ಎಂದು ಹೇಳಿದ್ದಾರೆ.