ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆದರಿಕೆಗೆ ಹೆದರುವುದಿಲ್ಲ: ಬೇಳೂರ್‌ಗೆ ಮೋದಿ ಗುದ್ದು

Last Updated 6 ಮಾರ್ಚ್ 2019, 19:14 IST
ಅಕ್ಷರ ಗಾತ್ರ

ಕಾಂಚೀಪುರಂ (ತಮಿಳುನಾಡು): ‘ಮೋದಿಗೆ ಗುಂಡಿಕ್ಕಿ’ ಎಂದಿದ್ದ ಕಾಂಗ್ರೆಸ್‌ನ ಬೇಳೂರು ಗೋಪಾಲಕೃಷ್ಣ ಅವರ ಮಾತಿಗೆ ಮೋದಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ವಿರುದ್ಧದ ಯಾವುದೇ ಬೆದರಿಕೆ ಹಾಗೂ ನಿಂದನೆಗಳಿಗೆ ಕಿವಿಗೊಡುವುದಿಲ್ಲ ಎಂದಿರುವ ಅವರು, ‘ನನ್ನ ದೇಹದ ಪ್ರತಿ ಹನಿಯೂ ಭಾರತಕ್ಕಾಗಿ ಮೀಸಲು’ ಎಂದು ಹೇಳಿದ್ದಾರೆ.

‘ನನ್ನ ಕೆಲಸ ಮಾಡಲು ಮಾತ್ರ ನಾನಿಲ್ಲಿದ್ದೇನೆ. ಭಾರತವನ್ನು ಸುಭದ್ರ ಹಾಗೂ ಸಮೃದ್ಧಗೊಳಿಸಲು ಸಾಧ್ಯವಿ
ರುವ ಎಲ್ಲ ಯತ್ನಗಳನ್ನೂ ಮಾಡುವುದು ಮಾತ್ರ ನನ್ನ ಕೆಲಸ’ ಎಂದು ಮೋದಿ ಹೇಳಿದ್ದಾರೆ. ವಿರೋಧ ಪಕ್ಷಗಳು ರಾಜಕೀಯ ಹಾಗೂ ಸ್ವಹಿತಾಸಕ್ತಿಯಿಂದ ಕೆಲಸ ಮಾಡುತ್ತಿವೆ ಎಂದು ದೂರಿದ್ದಾರೆ.

‘ನಿಂದನೆ ಮಾಡುವ ಪ್ರವೃತ್ತಿ ದಿನೇ ದಿನೇ ಹೆಚ್ಚುತ್ತಿದ್ದು, ಇದರಲ್ಲಿ ಯಾರು ಹೆಚ್ಚು ನಿಂದನೆ ಮಾಡುತ್ತಾರೆ ಎಂಬ ಬಗ್ಗೆ ಅವರಲ್ಲೇ ಸ್ಪರ್ಧೆ ಇದೆ’ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT